ಕರ್ನಾಟಕ ತಂಡದ ಸ್ಟಾರ್ ಬೌಲರ್ ಕೌಶಿಕ್ ಬೌಲಿಂಗ್‌ಗೆ ಮಂಕಾದ ಪಂಜಾಜ್!

ಹೊಸದಿಗಂತ ವರದಿ ಹುಬ್ಬಳ್ಳಿ:

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಆರಂಭವಾದ ರಣಜಿ ಪಂದ್ಯದಲ್ಲಿ ಪಂಜಾಬ ತಂಡ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 152 ಗಳಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು.
ನೇಹಾಲ್ ವಡೇರಾ (44 ರನ್ , 77ಎಸೆತ್, 7 ಫೋರ್) ಬಿಟ್ಟರೆ ಯಾರೊಬ್ಬರು ಹೆಚ್ಚು ರನ್ ಗಳಿಸಲಿಲ್ಲ. ಕರ್ನಾಟಕ ಬೌಲರ್ ಗಳಾದ ವಿ. ಕೌಶಿಕ್ 7 ವಿಕೆಟ್, ವಿಜಯಕುಮಾರ ವೈಶಾಕ್ 2 ಹಾಗೂ ರೋಹಿತ್ ಕುಮಾರ್ 1 ವಿಕೆಟ್ ಗಳಿಸಿದರು.

ಊಟದ ಬಳಿಕ 35 ಓವರ್ ನಲ್ಲಿ ವಿಜಯಕುಮಾರ ವೈಶಾಕ್ ಅವರು ಪಂಜಾಬ ಮಧ್ಯಕ್ರಮಾಂಕದ ಆಟಗಾರ ಪ್ರೀರಿತ್ ದತ್ತಾ ಅವರ ವಿಕೆಟ್ ಕಬಳಿಸಿದರು. ಬಳಿಕ 38 ಓವರ್ ನಲ್ಲಿ ವಿ. ಕೌಶಿಕ್ ಎರಡು ವಿಕೆಟ್ ತೆಗೆದರು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಮಯಾಂಕ್ ಮಾರ್ಕಂಡೇ ಹಾಗೂ ಬಾಲ್ತೇಜ್ ಸಿಂಗ್( 21 ರನ್, 47 ಎಸೆತ ) ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!