ಕಾಸರಗೋಡು: ಆಳ ಸಮುದ್ರದಲ್ಲಿ ಸಿಲುಕಿಕೊಂಡ 12 ಮೀನುಗಾರರು ಸುರಕ್ಷಿತವಾಗಿ ದಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಉಪ್ಪಳ – ಕುಂಬಳೆ ನಡುವಿನ ಅಳ ಸಮುದ್ರದಲ್ಲಿ ಸಿಲುಕಿದ್ದ ಹನ್ನೆರಡು ಮಂದಿ ಮೀನುಗಾರರನ್ನು ಕರಾವಳಿ ಪೊಲೀಸರು ಹಾಗೂ ಮೀನುಗಾರರು ಜಂಟಿಯಾಗಿ ರಕ್ಷಿಸಿದ್ದಾರೆ.
ಈ ಮೀನುಗಾರರು ಕಳೆದ ಮೂರು ದಿನಗಳ ಹಿಂದೆ ನೀಲೇಶ್ವರ ಕಡಲ ತೀರದಿಂದ ಬೋಟ್‌ನಲ್ಲಿ ಮೀನುಗಾರಿಕೆ ತೆರಳಿದ್ದರು. ಬೋಟ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಆಳ ಸಮುದ್ರದಲ್ಲಿ ಸಿಲುಕಿದ್ದ ಇವರು ನೆರವಿಗಾಗಿ ಪ್ರಯತ್ನಿಸಿದ್ದು, ಮೊಬೈಲ್ ಸಿಗ್ನಲ್ ಕೊರತೆಯಿಂದ ಸಂಪರ್ಕ ಸಾಧ್ಯವಾಗಿರಲಿಲ್ಲ. ಕೊನೆಗೂ ಶುಕ್ರವಾರ ಮೊಬೈಲ್ ಸಂಪರ್ಕ ಲಭಿಸಿ ಕುಂಬಳೆ ಶಿರಿಯದಲ್ಲಿರುವ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಕರಾವಳಿ ಪೊಲೀಸರು ಮೀನುಗಾರರ ನೆರವಿನಿಂದ ಈ ಮೀನುಗಾರರನ್ನು ಕುಂಬಳೆ ಕಡಲ ಕಿನರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!