ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದಲೂ ದೇಣಿಗೆ ಹರಿದು ಬರುತ್ತಿದೆ. ಸಿರಿವಂತರಿಂದ ಸಣ್ಣಪುಟ್ಟ ದಿನಗೂಲಿ ಮಾಡುವ ಭಕ್ತರಿಂದಲೂ ದೇಣಿಗೆ ಅಯೋಧ್ಯೆ ರಾಮ ಮಂದಿರ ತಲುಪಿದ್ದು, ಈಗ ಕಾಶಿ ಪ್ರಯಾಗ ರಾಜ್ ಭಿಕ್ಷುಕರು ಸೇರಿ 4.5 ಲಕ್ಷ ದೇಣಿಗೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶ್ರೀ ರಾಮ ಮಂದಿರ ತೀರ್ಥ ಟ್ರಸ್ಟ್ಗಾಗಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿದ್ದು ಈ ಅಭಿಯಾನದಲ್ಲಿ 300 ಕ್ಕೂ ಅಧಿಕ ಭಿಕ್ಷುಕರು ಭಾಗವಹಿಸಿದ್ದರು. ಇವರ ಈ ಸೇವಾ ಮನೋಭಾವಕ್ಕೆ ರಾಮಲಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಕೂಡ ನೀಡಲಾಗಿದೆ.
ಜನವರಿ 22 ರಂದು ನಡೆಯಲಿರುವ ಶ್ರೀರಾಮನ ವಿಗ್ರಹ ಪ್ರತಿಷ್ಟಾಪನೆಗೆ ಒಂದು ತಿಂಗಳಲ್ಲಿ ಸುಮಾರು 1 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸಂಗ್ರಹವಾಗಿತ್ತು. ಜೊತೆಗೆ ವಿದೇಶಿ ಭಕ್ತರು ಕೂಡ ದೇಣಿಗೆ ನೀಡಿದ್ದಾರೆ.