ಸೆಲೆಬ್ರಿಟಿಸ್ ಗಳಿಗೆ ‘ಕಾಟೇರ’ನ ವಿಶೇಷ ಸಂದೇಶ ರವಾನೆ, ‘ದಾಸ’ನ ಮಾತಿಗೆ ತಲೆದೂಗುತ್ತಾರ ಫ್ಯಾನ್ಸ್?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಜೈಲಿನ ಮುಂದೆ ದರ್ಶನ್ ಅಭಿಮಾನಿಗಳು ಸದಾ ಜಮಾಯಿಸುತ್ತಾರೆ. ದರ್ಶನ್ ಘೋಷಣೆಗಳನ್ನು ಕೂಗುತ್ತಾರೆ. ದರ್ಶನ್ ಅವರನ್ನು ಭೇಟಿಯಾಗಲು ಪೊಲೀಸರಿಗೆ ಅನುಮತಿ ಕೇಳುತ್ತಾರೆ. ಆದರೆ ಇದು ಅಸಾಧ್ಯ. ಇದೀಗ ದರ್ಶನ್ ಅವರೇ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

ಹೌದು, ನಟ ದರ್ಶನ್ ಜೈಲಿನಿಂದಲ್ಲೇ ತಮ್ಮ ಸೆಲೆಬ್ರಿಟಿಸ್ ಗಳಿಗೆ ಮನವಿ ಸಲ್ಲಿಸಿದ್ದಾರೆ. ಜೈಲು ಅಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಯಾರು ಕೂಡ ಜೈಲಿನ ಹತ್ತಿರ ಬರಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಜೈಲು ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿಗೆ ಅವಕಾಶವಿಲ್ಲ. ಹೀಗಾಗಿ ಸಮಯ ವ್ಯರ್ಥ ಮಾಡದಿರಿ ಎಂದು ದರ್ಶನ್ ಕೇಳಿಕೊಂಡಿದ್ದಾರೆ.

ಜೈಲಿನ ಹೊರಗೆ ನನ್ನನ್ನು ಭೇಟಿ ಮಾಡುವುದಕ್ಕಾಗಿ ಕಾಯಬೇಡಿ ಎಂದು ದರ್ಶನ್ ಜೈಲು ಅಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಇತ್ತೀಚೆಗೆ ಸೌಮ್ಯಾ ಎಂಬ ವಿಶೇಷ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಅವರು ಜೈಲಿನ ಬಳಿಗೆ ಬಂದು ದರ್ಶನ್ ಅವರನ್ನು ಭೇಟಿಯಾಗುವಂತೆ ಒತ್ತಾಯಿಸಿದರು. ಈ ಬಗ್ಗೆ ತಿಳಿದ ಕೇಳಿದ ದರ್ಶನ್ ಬೇಸರಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ದರ್ಶನ್ ಅವರನ್ನು ನೋಡಲು ಆಗಮಿಸಿದ್ದರು.

ಜೈಲಿನಲ್ಲಿ ಅಭಿಮಾನಿಗಳಿಗೆ ಅವಕಾಶವಿಲ್ಲ ಎಂಬುವ ವಿಚಾರ ದರ್ಶನ್ ಅವರಿಗೆ ಗೊತ್ತಿತ್ತು ಹೀಗಾಗಿ ಅಭಿಮಾನಿಗಳಿಗೆ ತಲುಪಿಸಿದ್ದಾರೆ. ಇದನ್ನು ಅಭಿಮಾನಿಗಳು ಅನುಸರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!