ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆರಗೋಡು ಕೇಸ್ ತನಿಖೆ ಆಗಲೇಬೇಕು. ಸರ್ಕಾರವೇ ನಕಲಿ ದಾಖಲೆ ಸೃಷ್ಟಿ ಮಾಡಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಪಾಪನೆಗೆ ಗೌರಿ ಶಂಕರ ಸೇವಾ ಟ್ರಸ್ಟ್ ಮನವಿ ಮಾಡಿತ್ತು. ಇಲ್ಲಿ ಧ್ವಜ ಎಂದು ಹೇಳಿತ್ತು, ಯಾವ ಧ್ವಜ ಎಂದು ಹೇಳಿರಲಿಲ್ಲ. ಸರ್ಕಾರವೇ ನಕಲಿ ದಾಖಲೆ ಸೃಷ್ಟಿ ಮಾಡಿದೆ ಎಂದಿದ್ದಾರೆ.
ಹೊಸ ಅರ್ಜಿ ಕೊಂಡು ಅದನ್ನು ತಿದ್ದಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ತನಿಖೆ ಆಗಲಿ ನಾನು ತಪ್ಪು ಮಾಡಿದ್ರೆ ನನ್ನನ್ನು ನೇಣಿಗೆ ಹಾಕಿ, ಆದ್ರೆ ತಪ್ಪು ನಿಮ್ಮದು ಅಂತಾದ್ರೆ ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ.