ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನ ಹೋರಾಟ ಮತ್ತೆ ಭುಗಿಲೆದ್ದಿದ್ದು, ಖಲಿಸ್ತಾನ ಮುಖಂಡ , ವಾರಿಸ್ ಪಂಜಾಬ್ ದೇ ಸಂಘಟನೆ ನಾಯಕ ಅಮೃತ್ಪಾಲ್ ಸಿಂಗ್ ಆಪ್ತ, ಅಪಹರಣ ಆರೋಪಿ ಲವ್ಪ್ರೀತ್ ಸಿಂಗ್ ಬಂಧನ ವಿರೋಧಿಸಿ ಹೋರಾಟ ತೀವ್ರಗೊಂಡಿದೆ.
ಇದರ ಬೆನ್ನಲ್ಲೇ ಪಂಜಾಬ್ ಆಪ್ ಸರ್ಕಾರ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿದೆ.
ಒಂದು ದಿನದ ಹಿಂದೆ ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್ಗಳನ್ನು ಭೇದಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಅಪಹರಣ ಪ್ರಕರಣದ ಆರೋಪಿ ಲವ್ಪ್ರೀತ್ ಸಿಂಗ್ ಅಲಿಯಾಸ್ ತೂಫಾನ್ನನ್ನು ಬಿಡುಗಡೆ ಮಾಡಬೇಕೆಂದು ಅಗಹಿಸಿದ್ದರು. ಇದಕ್ಕೂ ಮೊದಲು, ದುಬೈನಿಂದ ಹಿಂದಿರುಗಿದ ಅಮೃತಪಾಲ್ ಸಿಂಗ್, ‘ವಾರಿಸ್ ಪಂಜಾಬ್ ದೇ’ ಎಂಬ ಸಂಘಟನೆಯ ಮುಖ್ಯಸ್ಥರು, ತಮ್ಮ ಬೆಂಬಲಿಗ ಲವ್ಪ್ರೀತ್ ಸಿಂಗ್ ಬಿಡುಗಡೆಗೆ ಸುಗ್ರೀವಾಜ್ಞೆ ನೀಡಿದ್ದರು.ಇದೀಗ ಪಂಜಾಬ್ ಪೊಲೀಸರ ಮನವಿ ಪುರಸ್ಕರಿಸಿದ ಅಜ್ನಾಲ ಕೋರ್ಟ್, ಕಿಡ್ನಾಪ್ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಪಂಜಾಬ್ ಪೊಲೀಸ್ ಹಾಗೂ ಸರ್ಕಾರದ ನಡೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಖಲಿಸ್ತಾನ ಬೆಂಬಲಿಸಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಸರ್ಕಾರ, ನಾಟಕೀಯವಾಗಿ ಕಿಡ್ನಾಪ್ ಆರೋಪಿಯನ್ನು ಬಿಡುಗಡೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.