ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಲಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಸತ್ರಂಪಾಡು ಗ್ರಾಮದಲ್ಲಿ ಈ ನಡೆದಿದೆ.
ಸತ್ರಂಪಾಡು ಗ್ರಾಮದ ಸೌಭಾಗ್ಯಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಮಾರುವೇಷದಲ್ಲಿ ವ್ಯಕ್ತಿಯೊಬ್ಬ ಬಂದು ಈ ಕೃತ್ಯ ಎಸಗಿದ್ದಾನೆ. ಸೌಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತನ ವೇಷದಲ್ಲಿ ಬಂದ ಕಳ್ಳನೊಬ್ಬ ಮೊದಲು ಕೈಮುಗಿದು ದೇವರನ್ನು ಪ್ರಾರ್ಥಿಸಿದ. ನಂತರ ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾನೆ. ದೇವಿಯ ಕೊರಳಲ್ಲಿದ್ದ ಅಮೂಲ್ಯ ಮಂಗಳಸೂತ್ರವನ್ನು ಕದ್ದು ಓಡಿ ಹೋಗಿದ್ದಾನೆ.
ಕದೀಮ ಮಂಗಳಸೂತ್ರವನ್ನು ಕದಿಯುತ್ತಿರುವುದು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಲಾಗಿದೆ.
“Oh God! Temple Deity Mangalsutra Stolen”
In Andhra Pradesh’s Eluru Satrampadu, a shocking incident occurred at the Saubhagyalakshmi temple.
A man, pretending to be a devotee, committed a theft. He was captured on CCTV while he was stealing a mangalsutra from the deity’s neck.… pic.twitter.com/QQg8z4h8Bj
— Sudhakar Udumula (@sudhakarudumula) April 7, 2024