ಭಕ್ತರ ಸೋಗಿನಲ್ಲಿ ಬಂದು ಗರ್ಭಗುಡಿಗೆ ನುಗ್ಗಿ, ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಖತರ್ನಾಕ್ ಕಳ್ಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಲಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಸತ್ರಂಪಾಡು ಗ್ರಾಮದಲ್ಲಿ ಈ ನಡೆದಿದೆ.

ಸತ್ರಂಪಾಡು ಗ್ರಾಮದ ಸೌಭಾಗ್ಯಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಮಾರುವೇಷದಲ್ಲಿ ವ್ಯಕ್ತಿಯೊಬ್ಬ ಬಂದು ಈ ಕೃತ್ಯ ಎಸಗಿದ್ದಾನೆ. ಸೌಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತನ ವೇಷದಲ್ಲಿ ಬಂದ ಕಳ್ಳನೊಬ್ಬ ಮೊದಲು ಕೈಮುಗಿದು ದೇವರನ್ನು ಪ್ರಾರ್ಥಿಸಿದ. ನಂತರ ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾನೆ. ದೇವಿಯ ಕೊರಳಲ್ಲಿದ್ದ ಅಮೂಲ್ಯ ಮಂಗಳಸೂತ್ರವನ್ನು ಕದ್ದು ಓಡಿ ಹೋಗಿದ್ದಾನೆ.

ಕದೀಮ ಮಂಗಳಸೂತ್ರವನ್ನು ಕದಿಯುತ್ತಿರುವುದು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!