ಹಾವೇರಿಯ ಹಿರೇಕೆರೂರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿದ ಕಿಚ್ಚ ಸುದೀಪ್

ಹೊಸದಿಗಂತ ವರದಿ,ಹಾವೇರಿ:

ಭಾರತ ಸುಭಿಕ್ಷವಾಗಿ ಇರಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆ. ಅವರ ಮಾರ್ಗದರ್ಶನದಲ್ಲಿ ದೇಶ ಮತ್ತು ರಾಜ್ಯ ಮುನ್ನಡೆಯಲಿ. ಮೋದಿಜೀ ಈ ದೇಶದ ಬಗ್ಗೆ ಇಟ್ಟುಕೊಂಡ ಕನಸನ್ನು ನನಸು ಮಾಡಲು ಬಿಜೆಪಿಗೆ ಮತ ಹಾಕಿ ಎಂದು ಚಿತ್ರ ನಟ ಕಿಚ್ಚ ಸುದೀಪ ಹೇಳಿದರು.

ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋದಲ್ಲಿ ಬಾಗವಹಿಸಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಪರ ಮತಯಾಚನೆ ಮಾಡಿ ಮಾತನಾಡಿದರು.

ತಾಲೂನಲ್ಲಿ ಬಿ.ಸಿ.ಪಾಟೀಲ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ ಎನ್ನುವದು ಇಂದು ನಿಮ್ಮ ಹುಮ್ಮಸ್ಸು ನೋಡಿದರೆ ಗೊತ್ತಾಗುತ್ತೆ. ನೀವು ನಿಮ್ಮ ಜನನಾಯಕನ ಮೇಲೆ ಇಟ್ಟಿರುವ ಪ್ರಿತಿ ಅಭಿಮಾನ ಎಷ್ಟು ಅಂತ. ಇಂದು ಸೇರಿರುವ ತಾವುಗಳು ಬಿಜೆಪಿಗೆ ಮತ ಹಾಕಿ ಬಿ.ಸಿ.ಪಾಟೀಲ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಮಾಡಿ ಮೋದಿಜೀಯವರು ದೇಶದ ಬಗ್ಗೆ ಇಟ್ಟಿರುವ ಅಭಿವೃದ್ದಿ ಕನಸನ್ನು ಈಡೇರಿಸಿ ಎಂದರು.

ಬಿ.ಸಿ.ಪಾಟೀಲ ತಾಲೂಕಿನಲ್ಲಿ ಜನಪ್ರೀಯತೆ ಗಳಿಸಿದ್ದಾರೆ. ಅವರನ್ನು ಗೆಲ್ಲಿಸುತ್ತಿರಿ ಎಂಬ ನಂಬಿಕೆನೂ ಇದೆ. ಆದ್ದರಿಂದ ಬಿಜೆಪಿಗೆ ಮತ ಹಾಕುವ ಮೂಲಕ ನಿಮ್ಮ ನೆಚ್ಚಿನ ನಾಯಕನ್ನು ಗೆಲ್ಲಿಸಿ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಉನ್ನತ ಸ್ಥಾನದಲ್ಲಿ ಇದೆ ಇದಕ್ಕೆ ನಮ್ಮ ನಿಮ್ಮಲ್ಲರ ಹೆಮ್ಮೆಯ ಪ್ರದಾನಿ ಮೋದಿಜೀಯವರು. ದೇಶ ಮುಂದೆನೂ ಅಭಿವೃದ್ದಿಯಾಗಬೇಕು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡಬೇಕು ಅಂದ್ರೆ ನೀವುಗಳು ಬಿಜೆಪಿಗೆ ಮತ ಹಾಕಿ ಮೋದಿಜೀಯವರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ ಕರ್ನಾಟಕದ ಹೆಮ್ಮೆಯ ನಟ ಹಾಗೂ ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ ಅವರು ನನ್ನ ಪರವಾಗಿ ಇಂದು ಹಿರೇಕೆರೂರಗೆ ಬಂದು ರ‍್ಯಾಲಿಯಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದು ನನಗೆ ಹೆಚ್ಚು ಶಕ್ತಿ ತುಂಬಿದAತಾಯಿತು. ನನ್ನ ಅಭಿವೃದ್ದಿ ಕಾರ್ಯಗಳು ನನ್ನನ್ನು ಯಾವತ್ತು ಕೈಬಿಡುವದಿಲ್ಲ. ನಾನು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವುದಿಲ್ಲ. ಅಭಿವೃದ್ಧಿ ಕೆಲಸಗಳೇ ಮಾತನಾಡುತ್ತಿವೆ. ಕೊರೋನಾ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ೫ ಸಾವಿರದಂತೆ ರೂನಂತೆ ನೆರವನ್ನು ನೀಡಿದ್ದೇನೆ. ತಾಲೂಕಿನ ಮತದಾರರು ಮತ್ತೆ ನನ್ನ ಗೆಲ್ಲಿಸಿತ್ತಾರೆ ಎಂಬ ದೃಡ ನಂಬಿಕೆ ಇದೆ ಎಂದರು.

ಸುದೀಪ್ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರ ರೋಡ್ ಶೋ ಪಟ್ಟಣದ ಬಿ.ಜಿ.ಶಂಕರರಾವ್ ವೃತ್ತದಿಂದ ಮುಖ್ಯ ಬಿದಿಯಲ್ಲಿ ಸಾಗಿ ಸರ್ವಜ್ಞ ವೃತ್ತದ ವರೆಗೆ ಸಾಗಿತು. ರೋಡ್ ಶೋಗೆ ಆಗಮಿಸಿದ್ದ ಸಹಸ್ರಾರು ಜನಸ್ತೋಮ ಶೋದುದ್ದಕ್ಕೂ ಸುದೀಪ ಮತ್ತು ಬಿ.ಸಿ.ಪಾಟೀಲ ಪರ ಜೈ ಎಂಬ ಜೈಕಾರ ಮುಗಿಲು ಮುಟ್ಟಿತು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಭಗವಾನ್ ಧ್ವಜ ಕಂಡುಬoದವು.

ನಟ ಸುದೀಪನ್ನು ನೋಡಲು ತಾಲೂಕಿನ ಹಳ್ಳಿಗಳಿಂದ ಜನ ಗುಂಪು ಗುಂಪಾಗಿ ಬಂದು ರಸ್ತೆಯ ಬದಿಯಲ್ಲಿ ಇಂತು ನೋಡುತಿದ್ದ ದೃಶ್ಯ ಕಾಣುತಿತ್ತು. ಅಭಿಮಾನಿಗಳ ಪ್ರೀತಿಗೆ ನಟ ಸುಧೀಪ್ ಸಂತಸ ವ್ಯಕ್ತಪಡಿಸಿದರು.
ರೋಡ್ ಶೋದಲ್ಲಿ ಸೃಷ್ಠಿ ಪಾಟೀಲ, ತಾಲೂಕ ಬಿಜೆಪಿ ಅಧ್ಯಕ ಶಿವಕುಮಾರ ತಿಪ್ಪಶೇಟ್ಟಿ, ಪ್ರಧಾನ ಕಾರ್ಯದರ್ಶಿ ದೇವರಾಜ ನಾಗಣ್ಣನವರ, ದೊಡ್ಡಗೌಡ ,ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು, ಕಿಚ್ಚನ ಅಭಿಮಾನಿಗಳು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!