ಲೌಖೋವಾ ಅಭಯಾರಣ್ಯದಲ್ಲಿ ಇಬ್ಬರು ಶಂಕಿತ ಬೇಟೆಗಾರರ ​​ಹತ್ಯೆ, ತನಿಖೆಗೆ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೌಖೋವಾ ವನ್ಯಜೀವಿ ಅಭಯಾರಣ್ಯದಲ್ಲಿ ಇಬ್ಬರು ಶಂಕಿತ ಕಳ್ಳ ಬೇಟೆಗಾರರನ್ನು ಕೊಂದಿರುವ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಭಾನುವಾರ ಸೂಚಿಸಿದ್ದಾರೆ.

ಮೃತರನ್ನು 35 ವರ್ಷದ ಸಮರುದ್ದೀನ್ ಮತ್ತು 40 ವರ್ಷದ ಅಬ್ದುಲ್ ಜಲೀಲ್ ಎಂದು ಗುರುತಿಸಲಾಗಿದೆ.

ಅಸ್ಸಾಂ ಸಿಎಂ ಮಾತನಾಡಿ, ಕಳೆದ ರಾತ್ರಿ, ಸುತಿರ್‌ಪರ್ ಗ್ರಾಮದ ವ್ಯಕ್ತಿಗಳು ಲಖುವಾ-ಬುರಾಚಪರಿ ಮೀಸಲು ಅರಣ್ಯಕ್ಕೆ ಅತಿಕ್ರಮಣ ಮಾಡಿದ್ದಾರೆ. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಯೊಂದಿಗಿನ ಎನ್‌ಕೌಂಟರ್‌ನಲ್ಲಿ, ಸಿಬ್ಬಂದಿಯೊಬ್ಬರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು, ಇದರಿಂದಾಗಿ ಸಾವು ಸಂಭವಿಸಿದೆ. ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ತಕ್ಷಣ ತನಿಖೆ ನಡೆಸುವಂತೆ ಅಸ್ಸಾಂನ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!