ಹೊಸದಿಗಂತ ವರದಿ, ಮಡಿಕೇರಿ:
ಪ್ರವಾಸಕ್ಕೆಂದು ಕೊಡಗಿಗೆ ಆಗಮಿಸಿದ್ದ ಯುವಕನೊಬ್ಬ ಈಜಲು ತೆರಳಿ ಮುಳುಗಿ ಸಾವನ್ನಪ್ಪಿದ ಘಟನೆ ಹಾರಂಗಿ ಹಿನ್ನೀರು ಪ್ರದೇಶವಾದ ಹಾದ್ರೆಹೆರೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.
ಮೈಸೂರು ನಿವಾಸಿ ಶಶಿ( 30) ಮೃತಪಟ್ಟ ದುರ್ದೈವಿ.
ಮೈಸೂರಿನಿಂದ 15 ಮಂದಿಯ ತಂಡ ಕೊಡಗಿಗೆ ಪ್ರವಾಸ ಕೈಗೊಂಡಿದ್ದು, ಈ ನಡುವೆ ಹಾರಂಗಿ ಹಿನ್ನೀರು ಪ್ರದೇಶವಾದ ಹಾದ್ರೆ ಹೆರೂರುಗೆ ಭೇಟಿ ನೀಡಿತ್ತು.ಈ ವೇಳೆ ಶಶಿ ಎಂಬಾತ ನೀರಿಗೆ ಇಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈಜು ತಜ್ಞರು, ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.