ಹೊಸದಿಗಂತ ಡಿಜಿಟಲ್ ಡೆಸ್ಕ್:
ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಮೂಲದ ಯೋಧರೊಬ್ಬರು ನೀಲ್ಗಾಯ್ ತಿವಿತದಿಂದ ಮೃತಪಟ್ಟಿದ್ದಾರೆ.
ಗಲ್ಪೇಟೆ ನಿವಾಸಿಯಾದ ಹರ್ಷಿತ್ ಪ್ರಸನ್ನ ಅವರು ನೀಲ್ಗಾಯ್ ತಿವಿತಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ನೀಲ್ಗಾಯ್ ಎಂಬ ಕಾಡುಪ್ರಾಣಿಯ ಮರಿಗಳು ಪ್ಲಾಸ್ಟಿಕ್ ತಿನ್ನಲು ಮುಂದಾಗಿದ್ದವು. ಇದನ್ನು ಹರ್ಷಿತ್ ತಪ್ಪಿಸಲು ಹೋಗಿದ್ದರು. ಮರಿಗಳಿಗೆ ಹಾನಿ ಮಾಡಲು ಮುಂದಾಗಿದ್ದಾರೆ ಎಂದುಕೊಂಡ ನೀಲ್ಗಾಯ್ ಹಿಂಬದಿಯಿಂದ ಜೋರಾಗಿ ತಿವಿದಿತ್ತು.
ಕಳೆದ ನಾಲ್ಕು ವರ್ಷಗಳಿಂದ ಹರ್ಷಿತ್ ನಾವಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಮಗನನ್ನು ಕಳೆದುಕೊಂಡ ತಂದೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.