ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಸಮಸ್ಯೆ ಎದ್ದಿದ್ದು, ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಇದೀಗ ನೀರಿಲ್ಲದ ಬಿಸಿ ದೇವಸ್ಥಾನಗಳಿಗೂ ತಟ್ಟಿದೆ.
ಈಗಾಗಲೇ ಬೋರ್ವೆಲ್ಗಳು ಬತ್ತಿಹೋಗಿದ್ದು, ಹನಿ ನೀರಿಗೂ ಒದ್ದಾಡುವ ಪರ್ರಿಸ್ಥಿತಿ ಬಂದಿದೆ. ನೀರಿಲ್ಲದ ಸಮಸ್ಯೆ ದೇವಸ್ಥಾನಕ್ಕೂ ತಟ್ಟಿದ್ದು, ಕೈ ಕಾಲು ತೊಳೆಯಲು ಒಂದು ಹನಿ ನೀರಿಲ್ಲದಂತೆ ಆಗಿದೆ.
ದೇಗುಲದ ಒಳ ಹೋಗುವ ಮುನ್ನ ಕೈ ಕಾಲುಗಳನ್ನು ತೊಳೆದು ಶುದ್ಧವಾಗಿ ಒಳಗೆ ಹೋಗಲಾಗುತ್ತದೆ. ಕೆಲವರು ಶೂ ತೆಗೆದು ನೀರಿನಿಂದ ಕೈ ತೊಳೆದುಕೊಳ್ಳಲು ಹುಡುಕಾಡುತ್ತಾರೆ. ಆದರೆ ಯಾವುದಕ್ಕೂ ಈಗ ನೀರಿಲ್ಲದಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತೀರ್ಥಕ್ಕೂ ನೀರಿಲ್ಲದಂತಾಗುತ್ತದೆ.
ಇಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಪ್ರಸಾನ ನೀಡುವ, ಅನ್ನ ಸಂತರ್ಪಣೆ ಮಾಡುವ ದೇವಸ್ಥಾನಗಳಲ್ಲಿ ಉಚಿತವಾಗಿ ಟ್ಯಾಂಕರ್ ನೀರನ್ನು ನೀಡಿ ಎಂದು ಸರ್ಕಾರಕ್ಕೆ ಅರ್ಚಕರ ಸಂಘ ಮನವಿ ಮಾಡಿದೆ.
ಪಾತ್ರೆಗಳನ್ನು ತೊಳೆಯಲಿ ಡಿಶ್ವಾಶರ್ಗಳನ್ನು ಖರೀದಿ ಮಾಡಲಾಗಿದೆ. ಸದ್ಯ ಮಲ್ಲೇಶ್ವರಂ ಸುತ್ತಮುತ್ತಲಿನ ದೇಗುಲಗಳಲ್ಲಿ ಈಗ ನೀರಿದ್ದು, ಇನ್ನು ಎರಡು ತಿಂಗಳು ನೀರನ್ನು ಉಳಿಸಿ ಕೆಲಸ ಮಾಡುವುದು ಕಷ್ಟ ಎಂದು ಅರ್ಚಕರು ಹೇಳುತ್ತಿದ್ದಾರೆ.