ಕೊಂಕಣ ರೈಲ್ವೆ ಮಾರ್ಗ ಮುಳುಗಡೆ: ರೈಲು ಸಂಚಾರ ಸ್ಥಗಿತ

ಹೊಸದಿಗಂತ ವರದಿ, ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಮುರ್ಡೇಶ್ವರದ ನಡುವೆ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಹಳಿ ಸಂಪೂರ್ಣ ಮುಳುಗಡೆಯಾಗಿದ್ದು ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಸಂಚಾರದಲ್ಲಿದ್ದ ರೈಲುಗಳನ್ನು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೆ ಮಾಡಲಾಗಿದೆ.
ಮಡಗಾವ ಮಂಗಳೂರು ರೈಲು ಸಂಖ್ಯೆ 06601 ಸಂಚಾರ ರದ್ದುಗೊಂಡಿದ್ದು, ಮಂಗಳೂರು ಮಡಗಾವ 06602 ರೈಲು ಉಡುಪಿ ನಿಲ್ದಾಣದ ವರೆಗೆ ಸೀಮಿತಗೊಂಡಿದೆ.
ಉಳಿದಂತೆ ಸಂಚಾರದಲ್ಲಿದ್ದ ಎರ್ನಾಕುಲಂ ಪುಣೆ, ಬೆಂಗಳೂರು ಕಾರವಾರ ಎಕ್ಸ್ ಪ್ರೆಸ್, ಕಾರವಾರ ಯಶವಂತಪುರ ಎಕ್ಸ್ ಪ್ರೆಸ್ ಮೊದಲಾದ ರೈಲುಗಳು ಜಿಲ್ಲೆಯ ಭಟ್ಕಳ, ಶಿರೂರು, ಹೊನ್ನಾವರ ನಿಲ್ದಾಣಗಳಲ್ಲಿ ನಿಂತಿವೆ.
ನೀರು ತುಂಬಿ ಹಳಿಗಳಿಗೆ ಹಾನಿ ಸಂಭವಿಸಿದ್ದು ರೈಲು ಸಂಚಾರ ವಿಳಂಬವಾಗಿ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!