ಪ್ರಧಾನಿ‌‌ ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಭದ್ರತಾ ಲೋಪ‌: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ‌‌ ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಭದ್ರತಾ ಲೋಪ‌ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ(BJP) ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ನೇತೃತ್ವದ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

‘ಮೊಹಮ್ಮದ್ ನಲಪಾಡ್ ಹಾಗೂ ಸಿದ್ದಾಪುರ ಜಾನಿ ಪ್ರತಿಭಟನೆ ಮಾಡಿದ್ದಾರೆ. ಚೊಂಬು ಪ್ರದರ್ಶಿಸಿ ಪೊಲೀಸರಿದ್ದರೂ ಲೆಕ್ಕಿಸದೆ ನುಗ್ಗಿದ್ದಾರೆ. ಹೀಗಾಗಿ ನಿನ್ನೆ(ಏ.20) ಭದ್ರತೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇನ್ನು ಮೊಹಮ್ಮದ್‌ ನಲಪಾಡ್ ವಿರುದ್ಧ ಹಲವು ಪ್ರಕರಣಗಳಿವೆ. ಜೊತೆಗೆ ರೌಡಿಶೀಟರ್ ಸಿದ್ದಾಪುರ ಜಾನಿ ಕೂಡ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಮೊಹಮ್ಮದ್‌ ನಲಪಾಡ್ ಸಾಥ್ ಕೊಟ್ಟಿದ್ದಾರೆ. ಈ ಹಿನ್ನಲೆ ಚುನಾವಣಾ ಪ್ರಚಾರದಿಂದ‌ ನಲಪಾಡ್‌ರನ್ನು ದೂರ ಇರಿಸಬೇಕು, ಜೊತೆಗೆ ಸಿದ್ದಾಪುರ ಜಾನಿಯನ್ನ ರಾಜ್ಯದಿಂದ ಗಡಿಪಾರಿಗೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!