ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ರಾಮಭಕ್ತರು, ನೈವೇದ್ಯಕ್ಕೆಂದು ತಯಾರಿಸಿದ ಬರೋಬ್ಬರಿ 1,265 ಕೆಜಿ ತೂಕದ ಲಡ್ಡು ಇದೀಗ ಅಯೋಧ್ಯೆ ತಲುಪಿದೆ.
ಜನವರಿ 22 ರಂದು ನಡೆಯುವ ಪ್ರಾಣಪ್ರತಿಷ್ಠೆಗಾಗಿ ದೇಶಾದ್ಯಂತ ಜನರು ತಮ್ಮದೇ ರೀತಿಯಲ್ಲಿ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಹೈದರಾಬಾದ್ನ ಶ್ರೀರಾಮ್ ಕೇಟರಿಂಗ್ ಸರ್ವೀಸ್ನಿಂದ ಬೃಹತ್ ಗಾತ್ರದ ಲಡ್ಡು ತಯಾರಾಗಿದ್ದು, ಸದ್ಯ ಕರಸೇವಕಪುರಕ್ಕೆ ಆಗಮಿಸಿದೆ.
ದೇವರಿಂದ ನನ್ನ ಜೀವನದಲ್ಲಿ ಒಳ್ಳೆಯದೇ ಆಗಿದೆ. ನನ್ನ ವ್ಯಾಪಾರ ಹಾಗೂ ಕುಟುಂಬಕ್ಕೆ ಶ್ರೀರಾಮನ ಆಶೀರ್ವಾದವಿದೆ. ಪ್ರತಿ ದಿನವೂ ಒಂದು ಕೆಜಿ ಲಡ್ಡು ದೇವರಿಗೆ ಸಮರ್ಪಿಸುತ್ತೇನೆ ಎಂದು ಕೇಟರಿಂಗ್ ಮಾಲೀಕ ಎನ್ ನಾಗಭೂಷಣ್ ರೆಡ್ಡಿ ಹೇಳಿದ್ದಾರೆ.
#WATCH | Ayodhya, UP: 1265 kg laddoo prasad reaches Karsevakpuram from Hyderabad.
N Nagabhushanam Reddy of Sri Ram Catering Services, who prepared these laddoos says, “…God has blessed my business and my family. I had pledged to prepare 1kg laddoo for each day till I am… pic.twitter.com/iT1bYiETBy
— ANI (@ANI) January 20, 2024