ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗ ಮತ್ತು ಸೊಸೆ ಸೇರಿ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಸೀತಿಮನಿ ಗ್ರಾಮದ ಸಮೀಪದ ಜಮೀನಿನಲ್ಲಿ ನಡೆದಿದೆ. ಚನ್ನಪ್ಪ ತುಂಬರಮಟ್ಟಿ (60 ವರ್ಷ) ಕೊಲೆಯಾದವರು.
ಜಮೀನು ವಿವಾದ ಮತ್ತು ವ್ಯಭಿಚಾರದ ಆರೋಪದ ನಡುವೆ ಮಗ ಮತ್ತು ಸೊಸೆ ಚನ್ನಪ್ಪ ತುಂಬರಮಟ್ಟಿ ಅವರನ್ನು ಕೊಂದಿದ್ದಾರೆ. ಆರೋಪಿಗಳಾದ ಪುತ್ರ ಚನ್ನಬಸಪ್ಪ, ಶಿವಬಸವ್ವ ಹಾಗೂ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.