ಚಿಕ್ಕೋಡಿ ಹೊಸದಿಗಂತ ವರದಿ
ಬಸವ ಜಯಂತಿ ಪ್ರಯುಕ್ತ ತಡರಾತ್ರಿವರೆಗೂ ಡಿಜೆ ಸದ್ದಿಗೆ ಕುಣಿಯುತ್ತಿದ್ದ ಯುವಕರನ್ನು ತಡೆದಿದ್ದಕ್ಕೆ ಪೋಲಿಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ವಾಹನದ ಗಾಜು ಪುಡಿಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ವರೆಗೂ ನಡೆದ ಡಿ.ಜೆ ಮೇರವಣಿಗೆ ಸಾರ್ವಜನಿಕ ಅಡಚಣೆ ಉಂಟು ಮಾಡುತ್ತದೆ ಎಂದು ಯುವಕರಿಗೆ ಬುದ್ದಿ ಹೇಳಿ ಡಿಜೆ ನಿಲ್ಲಿಸುವಂತೆ ಪೋಲಿಸರು ತಡದಿದ್ದಕ್ಕೆ ಕಿಡಿಗೇಡಿಗಳು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ.
ಇನ್ನು ಸ್ಥಳಕ್ಕೆ ಚಿಕ್ಕೋಡಿ ಪೋಲಿಸ್ ಭೇಟಿ ನೀಡಿ ಕಿಡಿಗೇಡಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ