ಹೊಸದಿಗಂತ ವರದಿ,ವಿಜಯಪುರ:
ನಗರದ ವಕೀಲ ಎಸ್.ಎಸ್. ಖಾದ್ರಿ ಈತನನ್ನು ಒಂದು ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ವಕೀಲ ಎಸ್.ಎಸ್. ಖಾದ್ರಿ ಮೇಲೆ ನಗರದ ಗೋಳಗುಮ್ಮಟ ಠಾಣೆಯಲ್ಲಿ 5, ಜಲನಗರ ಹಾಗೂ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಒಂದೊಂದು ಪ್ರಕರಣ ಸೇರಿ ಈತನ ಮೇಲೆ 7 ಪ್ರಕರಣಗಳು ದಾಖಲಾಗಿದ್ದು, ಸಮಾಜದ ಸ್ವಾಸ್ಥ್ಯ, ಕೋಮುಗಲಭೆ ಸೃಷ್ಟಿಸುವ ಆರೋಪದ ಹಿನ್ನೆಲೆ ವಿಜಯಪುರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಠಾಣೆಯಲ್ಲಿ ಪ್ರತಿ ದಿನ ಹಾಜರಾತಿ ನೀಡುವಂತೆ ಆದೇಶಿಸಿ, ಮೇ 9, 2023 ರ ವರೆಗೆ ಗಡಿ ಪಾರು ಮಾಡಿ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಆದೇಶ ಮಾಡಿದ್ದಾರೆ.