ಬೇಗ ಕನ್ನಡ ಕಲಿಯಿರಿ, ಮುಂಬೈ ಮಂದಿಗೆ ನಟ ಸುದೀಪ್ ಪಾಠ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್ ಕಬ್ಜ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ಮುಂಬೈನಲ್ಲಿ ಪ್ರಮೋಷನ್ಸ್ ನಡೆಯುತ್ತಿದ್ದು, ಎಲ್ಲಿ ಹೋದರೂ ಕಿಚ್ಚ ಸುದೀಪ್ ಕನ್ನಡದಲ್ಲಿ ಮಾತನಾಡಿ ಅನ್ನೋದನ್ನು ಹೇಳೇ ಹೇಳ್ತಾರೆ.

ಇದೇ ರೀತಿ ಸಂದರ್ಭ ಮುಂಬೈ ಪ್ರಮೋಷನ್ಸ್ ವೇಳೆಯೂ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಿಚ್ಚ ಸುದೀಪ್ ಫ್ಯಾನ್ ಫಾಲೋಯಿಂಗ್ ಇನ್ನು ಹೆಚ್ಚಾಗಿದೆ.

ಸುದೀಪ್, ಶ್ರೀಯಾ ಶರಣ್, ಉಪೇಂದ್ರ ಹಾಗೂ ಆರ್. ಚಂದ್ರು ವೇದಿಕೆ ಮೇಲೆ ನಿಂತಿದ್ದಾರೆ. ಈ ವೇಳೆ ಆರ್. ಚಂದ್ರು ಕಬ್ಜ ಟೀಂ ವರ್ಕ್, ಇದು ಒಳ್ಳೆಯ ತಾಂತ್ರಿಕ ವರ್ಗದಿಂದ ಆಗಿರುವ ಸಿನಿಮಾ ಎಂದು ಹೇಳಿದ್ದಾರೆ. ಆದರೆ ಮುಂಬೈ ಮಂದಿಗೆ ಕನ್ನಡ ಅರ್ಥವಾಗಿಲ್ಲ. ಸುದೀಪ್ ಚಂದ್ರು ಹೇಳಿದ್ದನ್ನು ಟ್ರಾನ್ಸ್‌ಲೇಟ್ ಮಾಡ್ತೀನಿ ಎಂದು ಮೈಕ್ ತೆಗೆದುಕೊಂಡು, ಚಂದ್ರು ಹೇಳಿದ್ದು, ಆದಷ್ಟು ಬೇಗ ಕನ್ನಡ ಕಲೀರಿ ಅಂತ ಎಂದು ಹೇಳಿದ್ದಾರೆ. ಮಾ.17ರಂದು ಕಬ್ಜ ರಿಲೀಸ್ ಆಗಲಿದ್ದು, ಸಾಕಷ್ಟು ಭರವಸೆ ಮೂಡಿಸಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!