ʼಹಿಂದೂಗಳ ಕೈಗೆ ತಲವಾರು ಕೊಡಿ, ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆʼ

ಹೊಸದಿಗಂತ ವರದಿ, ಶಿವಮೊಗ್ಗ:
ಪೊಲೀಸ್ ಇಲಾಖೆಗೆ ಬಂದೂಕು ತರಬೇತಿ ನೀಡುವಂತೆ ಹಿಂದೂ ಯುವಕರ ಕೈಗೆ ತಲವಾರು ಕೊಟ್ಟು ಬಿಡಿ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆ ಎಂದು ಹಿಂದೂ ಮುಖಂಡ ಚೆನ್ನಬಸಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ಮಂಗಳವಾರ ರಾತ್ರಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರಿಗೆ ನಗರ ಬಿಜೆಪಿ ವತಿಯಿಂದ ಬುಧವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕಾನೂನು ಹಿಂದೂ ಸಮಾಜದ ಕೈಗಳನ್ನು ಕಟ್ಟಿ ಹಾಕಿದೆ. ಎಲ್ಲಾ ಬಲಿದಾನ ಮಾಡಿ ಸಮಾಜ ಉಳಿಸಿಕೊಳ್ಳಲು ಹೊರಟ ಕಾರ್ಯಕರ್ತರ ಪಡೆಯ ವಿಶ್ವಾಸ ಅಡಗಿಸುವ ಯತ್ನಗಳು ನಡೆಯುತ್ತಿವೆ. ಕಾನೂನು ಮೂಲಕವೇ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಿಂದೂ ಸಮಾಜದ ಸಂರಕ್ಷಣೆಗೆ ಎಲ್ಲಾ ಕಾನೂನು ಜಾರಿ ಮಾಡಬೇಕು. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಹಿಂದೂ ಯುವಕರ ಕೈಗಳಿಗೆ ಸರ್ಕಾರವೇ ಆಯುಧಗಳನ್ನು ಕೊಡಬೇಕು. ನಮ್ಮ ಸಂರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆ. ಹಿಂದೂ ಯುವಕರ ಕೊಲೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವೇ ಎಲ್ಲರನ್ನೂ ಸರ್ಕಾರವೇ ಕಾಪಾಡಬೇಕು. ದೇಶದಲ್ಲಿ ಹತ್ಯೆಗಳ ಮೂಲಕ ಅರಾಜಕತೆ ಸೃಷ್ಟಿಸುವ ಯತ್ನ ನಡೆಯುತ್ತಿದೆ. ಇದನ್ನು ಬಗ್ಗು ಬಡಿಯಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!