Sunday, December 10, 2023

Latest Posts

ಹೆಚ್.ಡಿ.ಕೆ ಎನ್.ಡಿ.ಎಯಿಂದ ಹೊರಬಂದು ಮಾತನಾಡಲಿ: ಕುಮಾರಸ್ವಾಮಿ ಆಫರ್ ಗೆ ಡಿ.ಕೆ.ಶಿವಕುಮಾರ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ.ಕೆ.ಶಿವಕುಮಾರ್ ಸಿಎಂ ಆಗುವುದಾದರೆ ಜೆಡಿಎಸ್ ನ 19 ಶಾಸಕರು ಬೆಂಬಲ ನೀಡುತ್ತೇವೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಡೋ ಕಾಲದಲ್ಲಿ ಮಾಡಿಲ್ಲ ಈಗ ಏನು ಮಾಡಲು ಆಗುತ್ತೆ? ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ಹೇಳಿಕೆಗೆ ಬಹಳ ಸಂತೋಷ. ನಮಗೂ ಎನ್.ಡಿ.ಎ ಗೂ ಸಂಬಂಧವಿಲ್ಲ. ಮೊದಲು ಹೆಚ್.ಡಿ.ಕೆ ಎನ್.ಡಿ.ಎಯಿಂದ ಹೊರಬಂದು ಮಾತನಾಡಲಿ ಎಂದು ಟಾಂಗ್ ನೀಡಿದರು.

ನಾವು 136 ಶಾಸಕರಿದ್ದೇವೆ. ಜನ ಕೊಟ್ಟಿರುವ ಆಶಿರ್ವಾದವಿದೆ ಸಾಕು ನಮಗೆ. ಬೆಂಬಲ ನೀಡಬೇಕಾದ ಕಾಲದಲ್ಲಿ ಏನೂ ಮಾಡಿಲ್ಲ. ಈಗೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!