ಗಾಜಾದಲ್ಲಿನ ನಮ್ಮ ಒತ್ತೆಯಾಳುಗಳ ಬಿಡುಗಡೆಗಾಗಿ ದೀಪ ಬೆಳಗಿಸಿ: ಭಾರತೀಯರಲ್ಲಿ ಇಸ್ರೇಲ್‌ ರಾಯಭಾರಿ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಮಾಸ್‌ ಒತ್ತಾಯಾಳಾಗಿರುವ ಇಸ್ರೇಲ್‌ ನಾಗರಿಕರ ಬಿಡುಗಡೆಗಾಗಿ ದೀಪಾವಳಿಯ ಈ ದಿನ ದೀಪ ಬೆಳಗಿಸಿ ಎಂದು ಭಾರತದಲ್ಲಿರುವ ಇಸ್ರೆಲ್‌ ರಾಯಭಾರಿ ನೌರ್‌ ಗಿಲೋನ್‌ ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

ದೇಶವು ಹಮಾಸ್‌ ಉಗ್ರರನ್ನು ನಾಶ ಮಾಡಿದರೆ, ಜನರ ಮೇಲಾಗುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಿಲೋನ್‌ ‘ 240 ಜನರನ್ನು ಹಮಾಸ್‌ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಪ್ರತಿ ವರ್ಷ ದೀಪಗಳನ್ನು ಬೆಳಗುವುದರಿಂದ ಶ್ರೀ ರಾಮನು ದೀಪಾವಳಿ ಆಚರಣೆಗೆ ಆಗಮಿಸುತ್ತಾರೆ ಎನ್ನುವ ನಂಬಿಕೆಯಿದೆ. ಅದೇ ರೀತಿ ದೀಪ ಬೆಳಗಿಸುವುದರಿಂದ ನಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿ ಮರಳಬಹುದು’ ಎಂದು ಬರೆದುಕೊಂಡಿದ್ದಾರೆ.

https://twitter.com/NaorGilon/status/1722095460863852955?ref_src=twsrc%5Etfw%7Ctwcamp%5Etweetembed%7Ctwterm%5E1722095460863852955%7Ctwgr%5Edac487926742e959cea0dc5db999c8bdc7baf8dc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-dh29e00a9127c54509981c2950cc20f885%2Fmahaadevbettingaayapprakarana32janaraviruddhafirdaakhalu-newsid-n554882378

ಗಾಜಾದಲ್ಲಿನ ನಾಗರಿಕರು ದಕ್ಷಿಣದತ್ತ ಸ್ಥಳಾಂತರಗೊಳ್ಳಲು ಇಸ್ರೇಲ್‌ ವಾರಗಳವರೆಗೆ ಕಾದಿತ್ತು. ಆದರೆ ಹಮಾಸ್‌ ಉಗ್ರರು ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಅವರನ್ನು ಅಡಗಿರಿಸಿಕೊಳ್ಳುತ್ತಿದ್ದಾರೆ ಎಂದು ಗಿಲೋನ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!