ಬೇಸಿಗೆಯಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಬಳಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಬಹುದು. ಹಾಗಾಗಿ, ಈ ಕೆಳಗಿನ ಮಸಾಲೆಗಳನ್ನು ಮಿತವಾಗಿ ಬಳಸುವುದು ಒಳ್ಳೆಯದು:
ಕೆಂಪು ಮೆಣಸಿನಕಾಯಿ: ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಮತ್ತು ಎದೆಯಲ್ಲಿ ಉರಿ ಉಂಟುಮಾಡಬಹುದು. ಇದನ್ನು ಮಿತವಾಗಿ ಬಳಸಿ.
ಶುಂಠಿ: ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣ ಹೊಂದಿದೆ. ಅತಿಯಾಗಿ ಬಳಸುವುದರಿಂದ ಎದೆಯುರಿ, ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು. ರಕ್ತಸ್ರಾವದ ಸಮಸ್ಯೆ ಮತ್ತು ಮಧುಮೇಹ ಹೊಂದಿರುವವರು ಇದನ್ನು ಕಡಿಮೆ ಸೇವಿಸುವುದು ಉತ್ತಮ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಕೂಡ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದನ್ನು ಬೇಸಿಗೆಯಲ್ಲಿ ಮಿತವಾಗಿ ಸೇವಿಸುವುದು ಒಳ್ಳೆಯದು.
ಕರಿಮೆಣಸು: ಕರಿಮೆಣಸು ಕೂಡ ದೇಹದ ಉಷ್ಣತೆಯನ್ನ ಹೆಚ್ಚಿಸುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಆದಷ್ಟು ಕಡಿಮೆ ಬಳಸಬೇಕು.
ದಾಲ್ಚಿನಿ: ದಾಲ್ಚಿನಿ ಕೂಡ ದೇಹದ ಉಷ್ಣತೆ ಹೆಚ್ಚಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಆದಷ್ಟು ಕಡಿಮೆ ಬಳಸಬೇಕು. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು, ಮಿತವಾದ ಮಸಾಲೆ ಪದಾರ್ಥಗಳನ್ನು ಬಳಸಿ, ಮತ್ತು ಹೆಚ್ಚು ನೀರು ಕುಡಿಯುವುದು ಮುಖ್ಯ.