FOLLOWUP | ಕಡಬದಲ್ಲಿ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್ ಸಾವು: ಮೆಸ್ಕಾ ಅಧಿಕಾರಿಗಳ ವಿರುದ್ಧ ದೂರು ದಾಖಲು

ಹೊಸದಿಗಂತ ವರದಿ ಕಡಬ:

ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರದಂದು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ಬಾಗಲಕೋಟೆ ಮೂಲದ ದ್ಯಾವಣ್ಣ ದೊಡ್ಡಮನಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದರು.

ಮೃತ ಲೈನ್ ಮ್ಯಾನ್ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಕಳುಹಿಸದೇ ಹಾಗೂ ಹೆಲ್ಮೆಟ್ ಹ್ಯಾಂಡ್‌ಗ್ಲೌಸ್‌, ಶೂ ಸೇರಿದಂತೆ ಯಾವುದೇ ಸೇಫ್ಟಿ ಸಾಮಾಗ್ರಿಗಳನ್ನು ನೀಡದೆ ವಿದ್ಯುತ್‌ ದುರಸ್ಥಿ ಕೆಲಸಕ್ಕೆ ನಿರ್ಲಕ್ಷತನದಿಂದ ವಿದ್ಯುತ್‌ ಕಂಬ ಹತ್ತಲು ಹೇಳಿ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತರ ತಂದೆ ರೇವಣಪ್ಪ ದೊಡಮನಿ ಎಂಬವರು ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್‌ ಆದ ಸತ್ಯನಾರಾಯಣ ಸಿ.ಕೆ. ಮತ್ತು ಕಿರಿಯ ಇಂಜಿನಿಯರ್‌ ವಸಂತ ರವರ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!