“ಲೋಕ” ಚುನಾವಣಾ ಕ್ಯಾಂಪೇನ್‍ ರಂಗು: ಇಂದು ರಾಜ್ಯ ರಾಜಧಾನಿಯಲ್ಲಿ “ಚಾಣಕ್ಯ”ನ ಆರ್ಭಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಉದ್ದೇಶಿಸಿ ಪ್ರಚಾರ ಮಾಡಲಿದ್ದಾರೆ.

ರಾತ್ರಿ 7.35ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ವಿಶೇಷ ವಿಮಾನದಲ್ಲಿ ಬಂದು ಅಲ್ಲಿಂದ ರೋಡ್ ಶೋಗೆ ತೆರಳಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೋಮನಹಳ್ಳಿ ವೃತ್ತದ ಬಳಿಯ ವಿವೇಕಾನಂದ ವೃತ್ತದಿಂದ ರಾತ್ರಿ 7:50ಕ್ಕೆ ರೋಡ್‌ ಶೋ ಆರಂಭವಾಗಿ ಸೇಂಟ್ ಫ್ರಾನ್ಸಿಸ್ ಶಾಲೆಯ ಬಳಿ 8:45ಕ್ಕೆ ಮುಕ್ತಾಯಗೊಳ್ಳಲಿದೆ.

ಈ ರೋಡ್ ಶೋ ನಂತರ ಅಮಿತ್ ಶಾ ಕೇರಳ-ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!