ಹೊಸದಿಗಂತ ವರದಿ ತುಮಕೂರು:
ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಿಂಡಿಸ್ಕೆರೆಯ ಬಳಿಯಲ್ಲಿ ಲಾರಿಯ ಟೈಯರ್ ಒಡೆದು ಹೋಗಿ ಲಾರಿಯ ಚಾಲಕ ಸಾವನಪ್ಪಿದ್ದಾರೆ.
ಹಿಂಡಿಸ್ಕೆರೆ ಬಳಿಯಲ್ಲಿ 14 ಚಕ್ರದ ಲಾರಿಯ ಟೈಯರ್ ಹೀಟಾಗಿದೆಯೇ ಎಂದು ಪರೀಕ್ಷಿಸಲು ಹೋದ ವೇಳೆ ಟೈಯರ್ ಒಡೆದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತ ಚಾಲಕ ಕೊರಟಗೆರೆ ತಾಲ್ಲೂಕಿನ ಗುರು ಎಂದು ತಿಳಿದು ಬಂದಿದೆ. ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.