“ಎಂ.ಬಿ. ಪಾಟೀಲರ ಲಿಂಗಾಯತ ನಾಯಕತ್ವ ಪ್ರಶ್ನಾರ್ಹ”

ಹೊಸದಿಗಂತ ವರದಿ, ವಿಜಯಪುರ:

ಶಾಸಕ ಎಂ.ಬಿ.ಪಾಟೀಲ ಲಿಂಗಾಯತ ನಾಯಕ ಅಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರ, ಶಾಸಕ ಎಂ.ಬಿ. ಪಾಟೀಲ ಲಿಂಗಾಯತ ನಾಯಕರೇ ಅಲ್ಲ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಮೇಲೆ ಲಿಂಗಾಯತ ಸಮಾಜವನ್ನು ಎತ್ತಿ ಕಟ್ಟುವ ಕೆಲಸ ಬಿಡಬೇಕು ಎಂದರು.
ಲಿಂಗಾಯತ ಉಪ ಪಂಗಡಗಳ ಪಟ್ಟಿಯಲ್ಲಿ ಗೋವಿಂದ ಕಾರಜೋಳ ಅವರ ಸಮುದಾಯವಿದೆ. ಆದರೆ, ಎಂ.ಬಿ. ಪಾಟೀಲರು ಇಲ್ಲವೇ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!