ಮಾಲ್ಡೀವ್ಸ್ ಭಾರತದ ಆಪ್ತ ಸ್ನೇಹಿತ, ಕಷ್ಟಕಾಲದಲ್ಲಿ ಮೊದಲ ಆದ್ಯತೆಯಲ್ಲಿ ಸಹಾಯ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಮಾಲ್ಡೀವ್ಸ್ ಸಂಬಂಧಗಳು ಶತಮಾನಗಳಷ್ಟು ಹಳೆಯದು. ಮಾಲ್ಡೀವ್ಸ್‌ಗೆ ಯಾವುದೇ ಕಷ್ಟ ಬಂದರೂ ಸಹಾಯ ಮಾಡುವಲ್ಲಿ ಭಾರತ ಮುಂದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಐದು ದಿನಗಳ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯ್ಜು ಅವರೊಂದಿಗೆ ಸೋಮವಾರ(ಅ.7) ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಉಭಯ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ.

ಭಾರತವು ಮಾಲ್ಡೀವ್ಸ್ ಅನ್ನು ನೆರೆಹೊರೆ ಮತ್ತು ಆಪ್ತ ಸ್ನೇಹಿತ ಎಂದು ಭಾವಿಸುತ್ತದೆ. ನಮ್ಮ ನೆರೆಹೊರೆ ನೀತಿ ಮತ್ತು ಸಾಗರ ದೃಷ್ಟಿಯಲ್ಲಿ ಮಾಲ್ಡೀವ್ಸ್‌ಗೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ಪ್ರಧಾನ ಮೋದಿ ಹೇಳಿದ್ದಾರೆ.

ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದವು ಮತ್ತು ಅನೇಕ ಒಪ್ಪಂದಗಳಿಗೆ ಸಹಿ ಹಾಕಿದವು. ಮಾಲ್ಡೀವ್ಸ್‌ನ ಹನಿಮಧು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ರುಪೇ ಕಾರ್ಡ್’ ಅನ್ನು ಅಧಿಕೃತವಾಗಿ ವರ್ಚುಯಲ್​ ಮೂಲಕ ಪ್ರಾರಂಭಿಸಲಾಯಿತು. ಈಗ ಯುಪಿಐ ಮೂಲಕ ಎರಡು ದೇಶಗಳನ್ನು ಸಂಪರ್ಕಿಸುವ ಸಮಯ ಬಂದಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

ಭಾರತ-ಮಾಲ್ಡೀವ್ಸ್ ಸಂಬಂಧ ಪ್ರಮುಖವಾಗಿದೆ. ನಾವು ಯಾವಾಗಲೂ ಮಾಲ್ಡೀವ್ಸ್ ಜನರ ಆದ್ಯತೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಮೋದಿ ಹೇಳಿದರು. ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಮಾಲ್ಡೀವ್ಸ್‌ಗೆ ನಿರ್ಣಾಯಕ ಹಣಕಾಸಿನ ನೆರವು ನೀಡುವ ಭಾರತದ ನಿರ್ಧಾರವನ್ನು ಇದೇ ವೇಳೆ ಮೋದಿ ಘೋಷಿಸಿದರು.

ಹಣಕಾಸಿನ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಧ್ಯಕ್ಷ ಮುಯಿಝು ಅವರು ಧನ್ಯವಾದ ಹೇಳಿದರು. ಭಾರತವು ದ್ವೀಪ ರಾಷ್ಟ್ರದ ಅಗತ್ಯದ ಸಮಯದಲ್ಲಿ ಯಾವಾಗಲೂ ಜೊತೆಯಲ್ಲಿ ನಿಂತಿದೆ ಎಂದು ಹೇಳಿದರು. ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಅವರು ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದರು.

ಮಾಲ್ಡೀವ್ಸ್‌ಗೆ ಭಾರತವು ಅತಿದೊಡ್ಡ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸಲು ನಾನು ಬಯಸುತ್ತೇವೆ. ಭಾರತದ ಆರ್ಥಿಕ ಸಹಕಾರವು ಮೂಲಸೌಕರ್ಯ ಅಭಿವೃದ್ಧಿಗೂ ವಿಸ್ತರಿಸುತ್ತದೆ ಎಂದು ಹೇಳಿದರು.

ಉಭಯ ನಾಯಕರ ಭೇಟಿ ವೇಳೆ ಪಿಎಂ ಮೋದಿ ಮತ್ತು ಮುಯಿಝು ಅವರು ಭಾರತದ ಬೆಂಬಲಿತ ಯೋಜನೆಯಾದ ಮರು ಅಭಿವೃದ್ಧಿಪಡಿಸಿದ ಹನಿಮಾಧು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವರ್ಚ್ಯುವಲ್ ಆಗಿ ಉದ್ಘಾಟಿಸಿದರು. ಬಳಿಕ ಭಾರತವು ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಅನ್ನು ಪರಿಚಯಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!