ತೃಣಮೂಲ ಕಾಂಗ್ರೆಸ್‌ ನಲ್ಲಿ ಭಿನ್ನಮತ: 20 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚಿಸಿದ ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಂಗಳಾ ಸಿಎಂ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಎಲ್ಲಾ ಹುದ್ದೆಗಳನ್ನು ವಿಸರ್ಜಿಸಿದ್ದಾರೆ.
ಶನಿವಾರ ಕಾಳಿಘಾಟನ್‌ ನಲ್ಲಿರುವ ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯರ ಜತೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಇನ್ನು 20 ಸದಸ್ಯರನ್ನು ಒಳಗೊಂಡಿರುವ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ. ಇನ್ನು ಪಕ್ಷದ ಹೊಸ ಪದಾಧಿಕಾರಿಯನ್ನು ಶೀಘ್ರದಲ್ಲಿ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಅಮಿತ್‌ ಮಿತ್ರ, ಪಾರ್ಥ ಚಟರ್ಜಿ, ಸುದೀಪ್‌ ಬಂಡೋಪಾಧ್ಯಾಯ, ಅಭಿಷೇಕ್‌ ಬ್ಯಾನರ್ಕಿ, ಸುಬ್ರತಾ ಬಕ್ಷಿ, ಅನುಬ್ರತಾ ಮೊಡಲ್‌, ಅರೂಪ್‌ ವಿಶ್ವಾಸ್‌, ಫಿರ್ಹಾದ್‌ ಹಕೀಮ್‌, ಯಶ್ವಂತ್‌ ಸಿನ್ಹಾ, ಅಸೀಮಾ ಪಾತ್ರ, ಚಂದ್ರಿಮಾ ಭಟ್ಟಾಚಾರ್ಜಿ, ಕಕೂಲಿ ಘೋಷ್‌ ದಸ್ತಿದಾರ್‌, ಶೋಭಾನ್‌ ದೇವ್‌ ಚಟ್ಟೋಪಾಧ್ಯಾಯ, ಸುಖೇಂದು ಶೇಖರ್‌ ರಾಯ್‌, ಮೊಲೋಯ್‌ ಘಾಟಕ್‌, ಜ್ಯೋತಿಯಾ ಮಲಿಕ್‌, ಗೌತಮ್‌ ದೇವ್‌, ಬುಲುಚಿಕ್‌ ಬರೈಕ್‌ ಹಾಗೂ ಋಜೇಶ್‌ ತ್ರಿಪಾಠಿ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!