ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದರೊಬ್ಬರ ಕಾರು ಚಾಲಕ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನ ಪ್ರಾಣ ದ ಜೊತೆ ಚಲ್ಲಾಟವಾಡಿರುವ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ವ್ಯಕ್ತಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಲ್ಲದೆ ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಕೆ ಕಾರು ಹರಿಸಿ ಆತನನ್ನು ಬ್ಯಾನೆಟ್ ಮೇಲೆ ಮೂರು ಕಿಮೀ ವರೆಗೂ ಎಳೆದೊಯ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭಾನುವಾರ ರಾತ್ರಿ ಚೇತನ್ ಎಂಬ ವ್ಯಕ್ತಿ ಆಶ್ರಮ ಚೌಕ್ ನಿಂದ ನಿಜಾಮುದ್ದೀನ್ ದರ್ಗಾಕ್ಕೆ ಹೋಗುತ್ತಿದ್ದ. ಅದೇ ಸಮಯದಲ್ಲಿ ಬಿಹಾರ ಸಂಸದ ಚಂದನ್ ಸಿಂಗ್ ಅವರ ಬೆಂಗಾವಲು ಪಡೆಗೆ ಸೇರಿದ ಕಾರೊಂದು ಅದೇ ರಸ್ತೆಯಲ್ಲಿ ಸಂಚರಿಸುತ್ತದೆ. ಎಂಪಿ ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದ.. ಚೇತನ್ ವಾಹನಕ್ಕೆ ಪದೇ ಪದೇ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಏಕೆ ಹೀಗೆ ಮಾಡುತ್ತಿದ್ದೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಆತನ ಮೇಲೆ ಕಾರು ಚಲಾಯಿಸಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಚೇತನ್ ಕಾರಿನ ಬ್ಯಾನೆಟ್ ಮೇಲೆ ಹತ್ತಿದ್ದಾರೆ. ಆದರೂ ಹಿಂದೆ ಸರಿಯದ ಚಾಲಕ ಕಾರನ್ನು 2-3 ಕಿ.ಮೀ. ಎಳೆದೊಯ್ದಿದ್ದಾರೆ.ವ್ಯಕ್ತಿ ಪರಿಪರಿಯಾಗಿ ಬೇಡಿಕೊಂಡರೂ ಕಾರು ನಿಲ್ಲಿಸದೆ ಚಲಾಯಿಸಿದ್ದಾರೆ. ಸಂತ್ರಸ್ತ
ಚೇತನ್ ದೂರಿನ ಮೇರೆಗೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ವೇಳೆ ಸಂಸದ ಚಂದನ್ ಸಿಂಗ್ ಕಾರಿನಲ್ಲಿ ಇರಲಿಲ್ಲ, ಚಾಲಕ ಮಾತ್ರ ಇದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
#WATCH | Delhi: At around 11 pm last night, a car coming from Ashram Chowk to Nizamuddin Dargah drove for around 2-3 kilometres with a person hanging on the bonnet. pic.twitter.com/54dOCqxWTh
— ANI (@ANI) May 1, 2023