ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಬೆಂಗಳೂರಿನ ರಾಮೆಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೂ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಲ ಸಮಯದ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಈ ಎರಡೂ ಬ್ಲಾಸ್ಟ್ಗಳ ನಡುವೆ ಯಾವುದೇ ಸಾಮ್ಯತೆ ಇಲ್ಲ ಎಂದು ಹೇಳಿದ್ದರು.
ಆರೋಪಿ ಬಸ್ನಲ್ಲಿ ಬಂದು ಕೆಫೆಯಲ್ಲಿ ತಿಂದು ನಂತರ ಬ್ಯಾಗ್ ಇಟ್ಟು ಟೈಮರ್ ಸೆಟ್ ಮಾಡಿ ಬ್ಲಾಸ್ಟ್ ಮಾಡಿದ್ದಾನೆ. ಆತ ಯಾರೇ ಆಗಿದ್ದರೂ ಬಿಡುವ ಮಾತೇ ಇಲ್ಲ. ಪ್ರಕರಣದ ತನಿಖೆಗೆ ಪೊಲೀಸರು ೭-೮ ತಂಡ ರಚನೆ ಮಾಡಿದ್ದಾರೆ. ಕಾದು ನೋಡೋಣ ಎಂದಿದ್ದಾರೆ.