ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ (CAF commander) ಒಬ್ಬರನ್ನು ಮಾವೋವಾದಿಗಳು ( Maoists) ಹತ್ಯೆಗೈದ ಘಟನೆ ನಡೆದಿದೆ.
ಕಮಾಂಡರ್ ತೇಜು ರಾಮ್ ಭುರ್ಯ ಹತ್ಯೆಗೀಡಾದ ಕಮಾಂಡರ್ ಆಗಿದ್ದಾರೆ. ಅವರು ಶಿಬಿರದಿಂದ ಸಿಬ್ಬಂದಿ ಜೊತೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೇಜು ರಾಮ್ ಅವರಿಗೆ ಕೊಡಲಿಯಿಂದ ನಕ್ಸಲರು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾಳಿ ನಡೆಸಿದ ನಕ್ಸಲರ ಪತ್ತೆಗಾಗಿ ಸಿಎಎಫ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.