ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾಮಾಂಬ ದೇವಸ್ಥಾನದ ಬೀದಿಯ ಮನೆಯೊಂದರಲ್ಲಿ ಜಿಲೆಟಿನ್ ಕಡ್ಡಿ ಜತೆಗೆ ಬಾಂಬ್ ಸ್ಫೋಟಗೊಂಡಿರುವ ಘಟನೆ ಚಿತ್ತೂರು ಜಿಲ್ಲೆಯ ಕುಪ್ಪಂ ಪಟ್ಟಣದ ಪೆದ್ದಪಲ್ಲಿಯಲ್ಲಿ ನಡೆದಿದೆ.
ಅಪರಿಚಿತ ದುಷ್ಕರ್ಮಿಗಳು ದಂಪತಿ ಮನೆ ಹೊಸ್ತಿಲಲ್ಲಿ ಜಿಲೆಟಿನ್ ಕಡ್ಡಿ, ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ. ಪರಿಣಾಮವಾಗಿ ಮುರುಗೇಶ್ ಮತ್ತು ಧನಲಕ್ಷ್ಮಿ ದಂಪತಿ ಗಂಭೀರ ಗಾಯಗೊಂಡು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸ್ಫೋಟದಿಂದ ಮನೆ ಧ್ವಂಸವಾಗಿದ್ದು, ದಂಪತಿಯ ಸ್ಥಿತಿ ತುಂಬಾ ಗಂಭೀರವಾಗಿದೆ. ದಂಪತಿಯನ್ನು ಸ್ಥಳೀಯರು ಕುಪ್ಪಂ ಪಿಇಎಸ್ಗೆ ಸ್ಥಳಾಂತರಿಸಿದರು. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಂಪತಿಯನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ಸ್ಫೋಟ ನಡೆಸಿದ್ದಾರಾ? ಅಥವಾ ಇನ್ನೇನಾದರೂ ಆಗಿದೆಯೇ? ಎಂದು ಹಲವು ಆಯಾಮಾಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.