ಜೆಪಿ ನಡ್ಡಾ ರೋಡ್ ಶೋ ಉತ್ಸಾಹ ಮೇ 7ರಂದು ಮತಗಳಾಗಿ ಪರಿವರ್ತನೆ ಆಗಲಿ:ಡಾ. ಉಮೇಶ್ ಜಾಧವ್

ಹೊಸದಿಗಂತ ವರದಿ, ಕಲಬುರಗಿ :

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರ ರೋಡ್ ಶೋ ನಲ್ಲಿ ಆಗಮಿಸಿದ ನಿಮ್ಮೆಲ್ಲರ ಉತ್ಸಾಹವು ಮೇ.೭ರಂದು ನಡೆಯುವ ಮತದಾನದಲ್ಲಿ ಬಿಜೆಪಿಯ ಮತಗಳಾಗಿ ಪರಿವರ್ತನೆಗೊಳ್ಳಬೇಕು ಎಂದು ಡಾ. ಉಮೇಶ್ ಜಾಧವ್ ಹೇಳಿದರು.

ಕಲ್ಬುರ್ಗಿಯ ಗಣೇಶ ಮಂದಿರದಿಂದ ಸೂಪರ್ ಮಾರ್ಕೆಟ್ ವರೆಗೆ ನಡೆದ ನಡ್ದಾ ಅವರ ಬೃಹತ್ ರೋಡ್ ಶೋ ಶಕ್ತಿ ಪ್ರದರ್ಶನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ರೋಡ್ ಶೋ ದಲ್ಲಿ ಕಂಡ ಉತ್ಸಾಹ ಹಾಗೂ ಜನಸಾಗರ ನೋಡಿ ಅತ್ಯಂತ ಖುಷಿಯಾಗಿದೆ ‘ಅಬ್ ಕಿ ಬಾರ್ ಚಾರ್ ಸೌ ಪಾರ್ ‘ಘೋಷಣೆಯು ಸಾಕಾರಗೊಳ್ಳೋದು ಖಚಿತವಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲು ಕಲಬುರ್ಗಿಯಲ್ಲಿ ಮತದಾರರು ಮತಯಂತ್ರದ ಒಂದನೇ ಸೀರಿಯಲ್ ಮುಂದಿರುವ ಕಮಲದ ಗುರುತಿಗೆ ಮತ ಹಾಕಿ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಹೇಳಿದರು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಬಿಜೆಪಿ ನಡ್ದಾ ಐದು ರಾಜ್ಯಗಳ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಭರ್ಜರಿ ಜಯಸಾಧಿಸಿ ಗೆಲುವಿನ ಸರದಾರ ಎಂದು ಖ್ಯಾತಿ ಹೊಂದಿ ಇದೀಗ ಲೋಕಸಭಾ ಚುನಾವಣೆಯ ನೇತೃತ್ವವನ್ನು ವಹಿಸಿ ಕಲಬುರ್ಗಿಯ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಕಲ್ಬುರ್ಗಿಯ ಮಹಾಜನತೆಯ ಪರವಾಗಿ ಅವರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ ಈ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಕಾರಣಕರ್ತರಾಗಬೇಕು ಎಂದು ಮತದಾರರಲ್ಲಿ ವಿನಂತಿಸಿದರು.

ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರವರು ಮಾತನಾಡಿ, ನಡ್ಡಾ ಅವರು ನಡೆಸಿದ ರೋಡ್ ಶೋ ಭಾರಿ ಯಶಸ್ವಿಯಾಗಿದ್ದು ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ಎಲ್ಲರೂ ಸಿದ್ಧರಾಗಿ ನಿಂತ ಈ ಹುಮ್ಮಸ್ಸು ನಿಜಕ್ಕೂ ಕಾರ್ಯಕರ್ತರಿಗೆ ಪ್ರೇರಣೆ ನೀಡಿದೆ. ಈ ಬಾರಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುದಾಗಿ ಸಹಮತ ಸೂಚಿಸಲು ಎಲ್ಲರೂ ಮೊಬೈಲ್ ಟಾರ್ಚ್ ಆನ್ ಮಾಡಿ ಎಂದಾಗ ಸಾವಿರಾರು ಸಂಖ್ಯೆಯ ಮೊಬೈಲ್ ಗಳು ಬೆಳಕಿನ ಚಿತ್ತಾರ ಮೂಡಿಸಿದವು. ಬಿಜೆಪಿ ನಗರ ಅಧ್ಯಕ್ಷರಾದ ಚಂದು ಪಾಟೀಲ್ ಅವರು ಸ್ವಾಗತ ಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!