ಅತಿಯಾದ ಆಲೋಚನೆಗಳು ನಮ್ಮ ಮನಸ್ಸಿನ ಶಾಂತಿಯನ್ನು ಹಾಳುಮಾಡಿಬಿಡುತ್ತವೆ. ಅದರಲ್ಲೂ ಮುಖ್ಯವಾಗಿ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಬಿಟ್ಟುಬಿಡದೆ ಕಾಡುತ್ತಿದೆಯಾ? ಹಾಗಾದ್ರೆ ಇವತ್ತು ನಾವು ಹೇಳುವ ಈ ಟಿಪ್ಸ್ ಫಾಲೋ ಮಾಡಿ.
ಡೈರಿ ಬರೆಯುವುದನ್ನು ಅಭ್ಯಾಸ ಮಾಡಿ
ಮನಸ್ಸಿನ ಶಾಂತಿಯನ್ನು ನೀಡಲು ಡೈರಿ ಬರೆಯುವುದು ಅತ್ಯಂತ ಪರಿಣಾಮಕಾರಿ ಮಾರ್ಗ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಅದರಲ್ಲಿ ಬರೆಯಿರಿ. ಇದರಿಂದ ನಕಾರಾತ್ಮಕ ಯೋಚನೆಗಳಿಂದ ಹೊರ ಬರಲು ಸಹಕಾರಿಯಾಗಿದೆ.
ಧ್ಯಾನ
ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಪ್ರತಿದಿನ ಸ್ವಲ್ಪ ಹೊತ್ತು ಧ್ಯಾನ ಮಾಡಿ. ನಿಮ್ಮ ಯೋಚನೆಯನ್ನು ಒಳಗಿನಿಂದ ಕಡಿಮೆ ಮಾಡಲು ಪ್ರಯತ್ನಿಸಿ.
ಪ್ರಾಮಾಣಿಕವಾಗಿರಿ
ನಿಮ್ಮ ಸ್ವಂತ ತಪ್ಪುಗಳು ಎಲ್ಲಿವೆ ಎಂದು ಕಂಡುಹಿಡಿಯಿರಿ. ಅವುಗಳನ್ನು ಒಪ್ಪಿಕೊಳ್ಳುವುದು ಮತ್ತು ನಿಮ್ಮ ಸ್ವಂತ ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಫೋನ್ನಿಂದ ದೂರವಿರಿ
ನಿಮ್ಮ ಸ್ಮಾರ್ಟ್ಫೋನ್ ಅನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ. ಸಾಧ್ಯವಾದರೆ ಸಾಮಾಜಿಕ ಮಾಧ್ಯಮಗಳಿಗೆ ಹತೋಟಿ ಹಾಕಿ, ಬಳಕೆಯನ್ನು ಕಡಿಮೆ ಮಾಡಿ.