ಇಸ್ರೇಲ್‌ನ ಉತ್ತರ ಗಡಿಯಲ್ಲಿ ಕ್ಷಿಪಣಿ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇಸ್ರೇಲ್ ಮೇಲೆ ಲೆಬನಾನ್ ನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಭಾರತೀಯ ಮೂಲದ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ನ ಉತ್ತರದ ಗಡಿಯಲ್ಲಿರುವ ಮಾರ್ಗಲಿಯೊಟ್ ನಲ್ಲಿರುವ ಹಣ್ಣಿನ ತೋಟಕ್ಕೆ ರಾಕೆಟ್ ಅಪ್ಪಳಿಸಿದೆ.

ಇಸ್ರೇಲಿ ರಕ್ಷಣಾ ಸೇವೆಯ ವಕ್ತಾರ ಮಾಜೆನ್ ಡೇವಿಡ್ ಅಡೋಮ್ ಮಾತನಾಡಿ, ಘಟನೆಯು ಸೋಮವಾರ ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ, ಗಲಿಲಿ ಪ್ರದೇಶದ ಮಾರ್ಗಲಿಯೋಟ್ ಉದ್ಯಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಕೇರಳದ ಕೊಲ್ಲಂ ನಿವಾಸಿ ಪಟ್ನಿಬೆನ್ ಮ್ಯಾಕ್ಸ್‌ವೆಲ್ ಸಾವನ್ನಪ್ಪಿದ್ದಾರೆ. ಅವರ ದೇಹವನ್ನು ಜೀವಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಗಾಯಗೊಂಡ ಬುಷ್ ಜೋಸೆಫ್ ಜಾರ್ಜ್ ಅವರನ್ನು ಪೇಟಾ ಟಿಕ್ವಾದ ಬೆಲಿನ್ಸನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಮುಖ ಮತ್ತು ದೇಹದ ಮೇಲೆ ಹಲವು ಗಾಯಗಳಿದ್ದವು. ತಕ್ಷಣ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!