ಹೊಸದಿಗಂತ ವರದಿ, ವಿಜಯಪುರ:
ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ಪ್ರವೀಣರು. ಇಲ್ಲಿಯವರೆಗೆ ಎಲ್ಲ ಪ್ರಧಾನಿಗಳ ಪೈಕಿ ಅತಿ ಹೆಚ್ಚು ಸುಳ್ಳು ಹೇಳಿದ್ದು ಮಿಸ್ಟರ್ ನರೇಂದ್ರ ಮೋದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಎಎಸ್ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಮಹಿಳೆ, ದೀನದಲಿತರ ಪರವಾಗಿ ಎನನ್ನಾದರೂ ಮಾಡಿದ್ದಾರಾ ?. ಬೆಲೆ ಏರಿಕೆ ನಿರುದ್ಯೋಗ, ರೈತರ ಸಮಸ್ಯೆ ಕುರಿತು ಅವರು ಯಾವತ್ತು ಚರ್ಚೆ ಮಾಡಲ್ಲ. ಅವರು ತಾವು ಮಾಡಿದ ಸಾಧನೆ ಮುಂದಿಟ್ಟು ಮತ ಕೇಳಬೇಕು. ಅದನ್ನು ಬಿಟ್ಟು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜಾತಿ ಜಾತಿಗಳ ಮಧ್ಯೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ 14 ಆರ್ಟಿಕಲ್ ಪ್ರಕಾರ ಎಲ್ಲರೂ ಸಮಾನರು, 15, 16 ರಲ್ಲಿ ಸಹಿತ ಸ್ಪಷ್ಟವಾಗಿದೆ. ನಾನು ಇನ್ನೂ ಗೆಲ್ಲಲ್ಲ ಎಂದು ತಿಳಿದು ಹತಾಶರಾಗಿ ಮೋದಿ ಮಾತನಾಡುತ್ತಿದ್ದಾರೆ ಎಂದರು.
ಕರ್ನಾಟಕದಲ್ಲಿ 25 ಲೋಕಸಭಾ ಗೆಲಿಸಿಕೊಟ್ಟರು. ಇವರು ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನೆ ಮಾಡಿದ್ದಾರಾ ?, ಇವರೆಲ್ಲರಿಗೂ ನರೇಂದ್ರ ಮೋದಿ ಕಂಡರೆ ಭಯ ಇದೆ. ಯಾರು ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೋ ಅಂತವರು ಲೊಕಸಭೆಗೆ ಹೋಗಬೇಕು. ನರೇಂದ್ರ ಮೋದಿ ಅವರು ಕೊಟ್ಟ 15 ಲಕ್ಷ ಕೊಡುವ ಭರವಸೆ ಇನ್ನೂ ಇಡೇರಿಲ್ಲ. ನಿರುದ್ಯೋಗ ಯುವಕ, ಯುವತಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ 10 ಲಕ್ಷ ಉದ್ಯೋಗ ಕೂಡ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಆದರೆ ಎಲ್ಲಿ ಮಾಡಿದರು ಎಂದರು.