ಹೊಸದಿಗಂತ ವರದಿ ಉಡುಪಿ:
ಮಿಥುನ್ ರೈ ಹೇಳಿದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಕ್ರಿಯೆ ನೀಡಿ ಆತನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕ ಮಿಥುನ್ ರೈ ಬಗ್ಗೆ ವ್ಯಂಗ್ಯ ವಾಡಿದರು.
ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶೋಭಾ ಕರಂದ್ಲಾಜೆ ಜೊತೆ ಫೋಟೋ ತೆಗೆದವರಿಗೆ 5000 ಬಹುಮಾನ ಘೋಷಿಸಿದ ಬಗ್ಗೆ ತಿರುಗೇಟು ನೀಡಿದರು. ಎಲ್ಲರೂ ಸೆಲ್ಫಿ ತೆಗೆಯಲು ಬರಲಿ, ಮಿಥುನ್ ರೈ ಮೊದಲು ಬರಲಿ ಎಂದು ಚಾಟಿ ಬೀಸಿದರು.