ಸುರಪುರದ ಕಾಲೇಜಿನಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅಂತಿಮ ದರ್ಶನ

ಹೊಸದಿಗಂತ ವರದಿ ಯಾದಗಿರಿ:

ಸುರಪುರ ಮತಕ್ಷೇತ್ರದ ಶಾಸಕ‌ ರಾಜಾ ವೆಂಕಟ್ಟಪ್ಪ ನಾಯಕ್ ಅವರು ನಿನ್ನೆ ನಿಧನರಾದ ಹಿನ್ನೆಲೆಯಲ್ಲಿ ಇಂದು ಸುರಪುರ ನಗರದ ಶ್ರೀ ಫ್ರಭು ಕಾಲೇಜಿನಲ್ಲಿ‌ ಸಾರ್ವಜನಿಕ ಅಂತಿಮ‌ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ನಿನ್ನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಶಾಸಕ ಹಾಗೂ ಹಾಲಿ ರಾಜ್ಯ ಉಗ್ರಾಣ ನಿಮಗದ ಅಧ್ಯಕ್ಷರಾಗಿದ್ದ ರಾಜಾ‌ ವೆಂಕಟ್ಟಪ್ಪ ನಾಯಕ್ ಅವರ ಪಾರ್ಥಿವ ಶರೀರವನ್ನು ನೋಡಲು ಸುರಪುರ ಕ್ಷೇತ್ರದ ಜನತೆ ಜಮಾಯಿಸಿದ್ದು, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಜನರನ್ನು ನಿಭಾಯಿಸುತ್ತಿದ್ದಾರೆ.

ಯಾದಗಿರಿ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಕೊಂಡು, ಸ್ಥಳದಲ್ಲಿಯೇ ಕುಳಿತಿದ್ದಾರೆ. ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಜೊತೆಗಿದ್ದಾರೆ.

ಅಂತಿಮ ದರ್ಶನಕ್ಕೆ ಅವಕಾಶವಿದ್ದು, ನಗರದ ಪ್ರಭು ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುರಪುರ ರಾಜ ಮನೆತನದ ಸಂಪ್ರದಾಯದಂತೆ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!