ಶಿವಸೇನೆ ಕಚೇರಿ ಹತ್ತಿರ ಹನುಮಾನ್ ಚಾಲೀಸಾ ಧ್ವನಿವರ್ಧಕ- ಬಾಳಾಸಾಹೇಬ್ ಹಿಂದುತ್ವ ವಾರಸುದಾರಿಕೆಗೆ ಎಂ ಎನ್ ಎಸ್ ಯತ್ನ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯಾವಾಗ ಶಿವಸೇನೆ ತಥಾಕಥಿತ ಸೆಕ್ಯುಲರ್ ಪಕ್ಷಗಳೊಂದಿಗೆ ಸೇರಿಕೊಂಡು ತನ್ನ ನೀತಿಗಳನ್ನು ಬದಲಿಸಿಕೊಳ್ಳುತ್ತಿದೆಯೋ, ಬಾಳಾಸಾಹೇಬ್ ಠಾಕ್ರೆಯ ಹಿಂದುತ್ವದ ನಿಜ ವಾರಸುದಾರಿಕೆ ತೋರಿಸುವ ಅವಕಾಶ ತನಗಿದೆ ಎಂದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಯೋಚಿಸಿದಂತಿದೆ.

ಈ ಹಿಂದೆ, ರಾಜ್ ಠಾಕ್ರೆ ಆಜಾನ್ ಕೂಗುವುದಕ್ಕೆ ಧ್ವನಿವರ್ಧಕ ಬಳಸುವ ಮಸೀದಿಗಳ ಎದುರೇ ಹನುಮಾನ್ ಚಾಲೀಸಾ ಪಠಣದ ಧ್ವನಿವರ್ಧಕ ಹಾಕುವುದಾಗಿ ಹೇಳಿದ್ದರು. ಈ ಸಂಬಂಧ ಪ್ರಕರಣವೊಂದರಲ್ಲಿ ಎಂ ಎನ್ ಎಸ್ ಕಾರ್ಯಕರ್ತರ ಬಂಧನವೂ ಆಗಿತ್ತು.

ಇದೀಗ, ರಾಮ ನವಮಿ ಪ್ರಯುಕ್ತ ಶಿವಸೇನೆಯ ಪ್ರಧಾನ ಕಚೇರಿ ಎದುರೇ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಎಂ ಎನ್ ಎಸ್ ಘೋಷಿಸಿದೆ.

 

“ಬಾಳಾಸಾಹೇಬ್ ಅವರೇ ನಿಮ್ಮ ಮಗ ಹಿಂದುಗಳು ಧ್ವನಿವರ್ಧಕ ಬಳಸುವುದನ್ನು ನಿಯಂತ್ರಿಸುತ್ತ, ಮಸೀದಿಗಳ ಧ್ವನಿವರ್ಧಕಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ನಿಜಾರ್ಥದಲ್ಲಿ ರಾಜ್ ಠಾಕ್ರೆ ಅವರೇ ಹಿಂದುತ್ವದ ವಾರಸುದಾರರು. ಉದ್ಧವ ಠಾಕ್ರೆ ಮನಸ್ಸಿನಲ್ಲಿ ಹಿಂದು ಭಾವನೆಗಳ ಬಗ್ಗೆ ಸಂವೇದನೆ ಬರುವಂತಾದಲಿ” ಎಂದು ದಾದರಿನಲ್ಲಿ ಗೋಡೆಪತ್ರಗಳನ್ನು ಅಂಟಿಸಲಾಗಿತ್ತು. ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!