ಯುವಕರ ಹತ್ಯೆಗೆ ರಣರಂಗವಾದ ಮಣಿಪುರ: ಬಿಜೆಪಿ ಕಚೇರಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಬ್ಬರು ಯುವಕರನ್ನು ಅಪಹರಿಸಿ ಹತ್ಯೆಗೈದ ಘಟನೆಯ ವಿರುದ್ಧ ಮಣಿಪುರ ಇದೀಗ ಮಣಿಪುರ ಇದೀಗ ರಣರಂಗವಾಗಿ ಮಾರ್ಪಟ್ಟಿದೆ. ತೌಬಲ್ ಜಿಲ್ಲೆಯ ಹೃದಯಭಾಗದಲ್ಲಿರುವ ಬಿಜೆಪಿ ಕಚೇರಿ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಉದ್ರಿಕ್ತರು ಕಚೇರಿಯ ಗೇಟ್ ಧ್ವಂಸ ಮಾಡಿ, ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಬಿಜೆಪಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ವಾಹನದ ಕನ್ನಡಿಗಳನ್ನೂ ಧ್ವಂಸಗೊಳಿಸಿ, ಕಚೇರಿಗೆ ಬೆಂಕಿ ಹಚ್ಚಿದರು.

ಇಂಡೋ-ಮ್ಯಾನ್ಮಾರ್ ಹೆದ್ದಾರಿಯಲ್ಲಿ ಟೈರ್‌ಗಳನ್ನು ಸುಟ್ಟು, ಮರದ ದಿಮ್ಮಿಗಳನ್ನು ಹಾಕಿ ಸಂಚಾರ ನಿರ್ಬಂಧಿಸಿದರು. ಕಲ್ಲು ತೂರಾಟದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳು, ಅಣಕು ಬಾಂಬ್‌ಗಳು ಮತ್ತು ಜೀವಂತ ಗುಂಡುಗಳನ್ನು ಹಾರಿಸಿದರು.

ಜುಲೈ 6 ರಂದು ನಾಪತ್ತೆಯಾಗಿ, ಹತ್ಯೆಯಾದ ಇಬ್ಬರು ಮೈತೇಯಿ ವಿದ್ಯಾರ್ಥಿಗಳ (ಯುವಕರು)ಸಾವಿಗೆ ನ್ಯಾಯವನ್ನು ಕೋರಿ ಇಂಫಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬೀದಿಗಳಿದು ಪ್ರತಿಭಟನೆ ನಡೆಸಿದರು. ನೂರಾರು ವಿದ್ಯಾರ್ಥಿಗಳು ಬುಧವಾರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನಿವಾಸದ ಕಡೆಗೆ ರ್ಯಾಲಿ ನಡೆಸಿದರು.

Protests in Manipur continue over killing of youths; Amit Shah dials CM  Biren Singh | India News - Times of India

ಮಣಿಪುರದಲ್ಲಿ ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 1 ಅಕ್ಟೋಬರ್ 2023 ರಂದು ರಾತ್ರಿ 7.45 ರವರೆಗೆ ನಿರ್ಬಂಧಗಳು ರಾಜ್ಯದಲ್ಲಿ ಜಾರಿಯಲ್ಲಿರುತ್ತವೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ದೃಷ್ಟಿಯಿಂದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳನ್ನು ಶುಕ್ರವಾರದವರೆಗೆ ಮುಚ್ಚಲಾಗುವುದು ಎಂದು ಮಣಿಪುರ ಸರ್ಕಾರ ತಿಳಿಸಿದೆ.

Manipur Violence News Highlights: Protests continue over students' killing  incident, AFSPA extended for 6 months | Mint

ಇಂಫಾಲ್ ಕಣಿವೆಯ ಅಡಿಯಲ್ಲಿ ಬರುವ 19 ಪೊಲೀಸ್ ಠಾಣೆಗಳು ಮತ್ತು ನೆರೆಯ ಅಸ್ಸಾಂನೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುವ ಪ್ರದೇಶವನ್ನು ಹೊರತುಪಡಿಸಿ, ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆ ಅಥವಾ AFSPA ಯನ್ನು ಮಣಿಪುರದಲ್ಲಿ ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!