ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವಾಯಲದ ಸೂಚನೆ ಮೇರೆಗೆ ದೇಶದ 244 ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ಆರಂಭವಾಗಿದೆ. ಬೆಂಗಳೂರಿನ 35 ಕಡೆಗಳಲ್ಲಿ ಸೈರನ್ ಮೊಳಗಿದ್ದು, ‘ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಅಣಕು ಪ್ರದರ್ಶನ ಆರಂಭವಾಗಿದೆ.
ಗೆಸ್ಟ್ ಹೌಸ್ನಲ್ಲಿ ಬೆಂಕಿ ಬಿದ್ದಾಗ ಹೇಗೆ ರಕ್ಷಣೆ ಮಾಡಬೇಕು? ಸಮುದ್ರ ತೀರದಲ್ಲಿ ಯಾವ ರೀತಿ ಕಾರ್ಯಾಚರಣೆ ಇರುತ್ತದೆ? ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು? ಎಂಬುದರ ಕಾರ್ಯಾಚರಣೆ ನಡೆಯುತ್ತಿದೆ
ಬೋಟ್ ರೆಸ್ಕ್ಯೂಗೆ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ ಹಾಗೂ ಆಲ್ ಇಂಡಿಯಾ ವಾಟರ್ ರೆಸ್ಕ್ಯೂ ಟೀಂನಿಂದ ಕಾರ್ಯಾಚರಣೆ ನಡೆಯುತ್ತಿದೆ. ಹಲಸೂರು ಕೆರೆಯಲ್ಲಿ ನಡೆಯುತ್ತಿರುವ ಬೋಟ್ ರೆಸ್ಕ್ಯೂ ನೋಡಲು ಬಿಜೆಪಿ ಸಂಸದ ಎಂಪಿ ಸುಧಾಕರ್ ಆಗಮಿಸಿದ್ದು, ಅಣಕು ಕವಾಯತು ವೀಕ್ಷಿಸುತ್ತಿದ್ದಾರೆ.