ರಂಗೇರಿದ ತೆಲಂಗಾಣ ಚುನಾವಣಾ ಕಣ: ಮೋದಿ, ಅಮಿತ್ ಶಾ, ಯೋಗಿ, ಜೆಪಿ ನಡ್ಡಾ ಪ್ರಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಬಿಜೆಪಿಯ ಉನ್ನತ ನಾಯಕತ್ವವು ಸರಣಿ ಪ್ರವಾಸಕ್ಕೆ ಸಜ್ಜಾಗಿದೆ. ಇದೇ ತಿಂಗಳ 30ರಂದು ಚುನಾವಣೆ ನಡೆಯಲಿದ್ದು, ಪ್ರಮುಖ ನಾಯಕರು ವ್ಯಾಪಕ ಪ್ರಚಾರ ನಡೆಸಲಿದ್ದಾರೆ.

ಇಂದು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬರಲಿದ್ದು, ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ನಾಯಕರು ಮೂರು ದಿನಗಳ ಕಾಲ (25, 26, 27) ಪ್ರಚಾರ ನಡೆಸಲಿದ್ದಾರೆ.

ಈ ಭೇಟಿಯ ವೇಳೆ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬ ವರದಿಗಳಿವೆ. 28ರಂದು ರೋಡ್ ಶೋ ಮೂಲಕ ಅಮಿತ್‌ ಶಾ ಅವರ ರಾಜ್ಯ ಪ್ರವಾಸ ಅಂತ್ಯಗೊಳ್ಳುವ ಸಾಧ್ಯತೆ ಇದೆ. 25 ಮತ್ತು 26 ರಂದು 10 ಸಾರ್ವಜನಿಕ ಸಭೆಗಳಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದು, ಜೆ.ಪಿ.ನಡ್ಡಾ ಸಾಥ್‌ ನೀಡಲಿದ್ದಾರೆ. ಆದಿಲಾಬಾದ್, ಕರೀಂನಗರ ಜಿಲ್ಲೆಗಳ ಜತೆಗೆ ಹೈದರಾಬಾದ್ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!