ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಎಕ್ಸ್ ಪ್ರೆಸ್ ತಿರುವನಂತಪುರದಿಂದ ಹೊರಟ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಕಾಸರಗೋಡಿಗೆ ಬಂದು ತಲುಪಿದೆ.
ಬೆಳಗ್ಗೆ 5.20ಕ್ಕೆ ತಂಬಾನೂರು ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ರೈಲು ಮಧ್ಯಾಹ್ನ 1.10ಕ್ಕೆ ಕಾಸರಗೋಡು ರೈಲು ನಿಲ್ದಾಣ ತಲುಪಿತು. ಈ ಮೂಲಕ ತಿರುವನಂತಪುರದಿಂದ ಕಾಸರಗೋಡಿಗೆ ನಡುವೆ 7 ಗಂಟೆ 50 ನಿಮಿಷ ಸಂಚಾರ ಮಾಡಿವೆ.
ಕಾಸರಗೋಡು ನಿಲ್ದಾಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ವಂದೇಭಾರತ್ ರೈಲನ್ನು ಜನತೆ ವೀಕ್ಷಿಸಿ ಖುಷಿಪಟ್ಟರು. ಆತ್ಮೀಯವಾಗಿ ಸ್ವಾಗತಿಸಿದರು.
ಈ ಮೂದಲು ತಿರುವನಂತಪುರಂನಿಂದ ಕಣ್ಣೂರಿಗೆ ಇದ್ದ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣವನ್ನು ನಿನ್ನೆ ಕಾಸರಗೋಡಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರವು ಘೋಷಿಸಿತ್ತು.
ಏ. 25ರಂದು ಪ್ರಧಾನಿ ಮೋದಿ ಅವರುಕೇರಳಕ್ಕೆ ಆಗಮಿಸಿ ವಂದೇ ಭಾರತ್ ನ ಅಧಿಕೃತ ಸಂಚಾರಕ್ಕೆ ಹಸಿರು ನಿಶಾನೆ ಪ್ರದರ್ಶನ ಮಾಡಲಿದ್ದಾರೆ .