ಹೊಸ ದಿಗಂತ ವರದಿ ವಿಜಯಪುರ:
ಐಟಿ ದಾಳಿಯಲ್ಲಿ ಸಿಕ್ಕ ಕೋಟ್ಯಂತರ ಹಣ ಕಾಂಗ್ರೆಸ್ಗೆ ಸಂಬಂಧ ಇಲ್ಲ ಎಂದು ಸಚಿವ ಎಂಬಿ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಕಾಂಟ್ರ್ಯಾಕ್ಟರ್ ದುಡ್ಡು, ಈ ದುಡ್ಡಿಗು ಕಾಂಗ್ರೆಸ್ಗೂ ಸಂಬಂಧ ಇಲ್ಲ. ನಮ್ಮ ಸರ್ಕಾರ ಬಂದಮೇಲೆ ನಾವು ಟೆಂಡರ್ ಸಹ ಕರೆದಿಲ್ಲ.