Friday, September 22, 2023

Latest Posts

ತೆಲಂಗಾಣಕ್ಕೆ ಪ್ರವಾಹದ ಮುಪ್ಪು? ಮೂಸಿ ನದಿ ಉಗ್ರರೂಪ, ಸಂಚಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣಕ್ಕೆ ಕಾಡಿಲಿದ್ಯಾ ಪ್ರವಾಹದ ಮುಪ್ಪು? ಈಗಾಗಲೇ ಭಾರೀ ಮಳೆಯಿಂದ ಮೂಸಿ ನದಿ ಉಕ್ಕಿ ಹರಿಯುತ್ತಿದೆ. ಮುಸರಂಬಾಗ್ ಸೇತುವೆಗೆ ತಾಗಿ ಪ್ರವಾಹದ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆಯನ್ನು ಮುಚ್ಚಲಾಯಿತು. ಉಸ್ಮಾನ್‌ ಸಾಗರ ಮತ್ತು ಹಿಮಾಯತ್‌ ಸಾಗರದಿಂದ ಭಾರಿ ಪ್ರಮಾಣದಲ್ಲಿ ನೀರು ಮೂಸಿಗೆ ಬರುತ್ತಿದೆ. ನಗರದ ಮೂಸಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ದ್ವಿಗುಣವಾಗುತ್ತಿದೆ.

ಹಿಮಾಯತ್ ಸಾಗರದಲ್ಲಿ ಆರು ಗೇಟ್‌ಗಳು ಹಾಗೂ ಉಸ್ಮಾನ್‌ ಸಾಗರದಲ್ಲಿ ಆರು ಗೇಟ್‌ಗಳು ಸೇರಿ 600 ಕ್ಯೂಸೆಕ್‌ ನೀರು ಮೂಸಿ ನದಿಗೆ ಸೇರುತ್ತಿದೆ. ಧಾರಾಕಾರ ನದಿ ನೀರಿನ ಹರಿವಿನಿಂದಾಗಿ ಹೈದರಾಬಾದ್‌ನ ಚಾದರ್ ಘಾಟ್ ಸೇತುವೆಯನ್ನೂ ಮುಚ್ಚಲಾಗಿದೆ.

ಸೇತುವೆಯ ಮೇಲ್ಭಾಗದಿಂದ ನೀರು ಹರಿಯುವ ಸಾಧ್ಯತೆ ಇರುವುದರಿಂದ ಪೊಲೀಸರು ದೊಡ್ಡ ಸೇತುವೆಯತ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಕೋಠಿಯಿಂದ ಮಲಕ್ ಪೇಟೆವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮತ್ತೊಂದೆಡೆ, ಮುಸಿ ಜಲಾನಯನ ಪ್ರದೇಶದ ಜನರಿಗೆ ಎಚ್ಚರಿಕೆಯಿಂದಿರುವಂತೆ ಜಿಎಚ್‌ಎಂಸಿ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!