ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಯರಮಸಾಳ ಜಂಕ್ಷನ್ ಬಳಿ ನಡೆದಿದೆ.
ದೇವರಗುಡ್ಡ ಗ್ರಾಮದಿಂದ ದೇವದುರ್ಗ ಪಟ್ಟಣಕ್ಕೆ ಲಾರಿ ಮೂಲಕ ಕೆಂಪು ಮೆಣಸಿನಕಾಯಿ ಮೂಟೆಗಳನ್ನು ಸಾಗಿಸಲಾಗುತ್ತಿತ್ತು.
ಶಾರ್ಟ್ ಸರ್ಕ್ಯೂಟ್ನಿಂದ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು. ಇದರಿಂದ 500 ಚೀಲಗಳಲ್ಲಿ 200ಕ್ಕೂ ಹೆಚ್ಚು ಮೆಣಸಿನಕಾಯಿ ಮೂಟೆ ಸುಟ್ಟು ಕರಕಲಾಗಿದೆ. ಬೆಂಕಿಯಿಂದ 300 ಚೀಲ ಮೆಣಸಿನಕಾಯಿಯನ್ನು ಸ್ಥಳೀಯರು ಉಳಿಸಿದ್ದಾರೆ.