‘ಕ್ಷಮಿಸಿ, ರಸ್ತೆಗಳ ಸ್ಥಿತಿ ಚೆನ್ನಾಗಿಲ್ಲ’ ಎಂದು ವ್ಯಕ್ತಿಯ ಕಾಲು ತೊಳೆದ ಸಚಿವರು: ಫೋಟೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶ ರಾಜಕೀಯದಲ್ಲಿ ವಿಶೇಷ ಹೆಸರು ಮಾಡಿರುವ ಇಂಧನ ಸಚಿವ ಪ್ರದ್ಯುಮ್ನ್ ಸಿಂಗ್ ತೋಮರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಕ್ಷೇತ್ರ ಗ್ವಾಲಿಯರ್‌ನ ರಸ್ತೆಗಳು ಸರಿಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಸಚಿವ ಪ್ರದ್ಯುಮನ್ ಸಿಂಗ್ ದುರಸ್ತಿ ಕಾರ್ಯ ಆರಂಭವಾದ ಬಳಿಕ ಸ್ವತಃ  ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಚಪ್ಪಲಿಯನ್ನು ರಾಜ್ಯ ಸಚಿವ ಪ್ರದ್ಯುಮ್ನ ಅವರಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಅಲ್ಲದೇ ಶಾಲೆಯಲ್ಲಿ ಶೌಚಾಲಯ ಸರಿಯಾಗಿಲ್ಲ ಸಾರ್.. ಎಂಬ ಪತ್ರ ನೋಡಿ ಸಚಿವರೇ ಕ್ಷೇತ್ರಕ್ಕೆ ಭೇಟಿ ನೀಡಿ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದರು. ಈಗ ಅದೇ ಸಚಿವ ಪ್ರದ್ಯುಮ್ನ ಮತ್ತೊಮ್ಮೆ ಸುದ್ದಿಯಲ್ಲಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಸಚಿವರು ವ್ಯಕ್ತಿಯೊಬ್ಬನ ಕಾಲು ತೊಳೆದು ಸುದ್ದಿಯಾಗಿದ್ದಾರೆ. ಸೋಮವಾರ (ಜನವರಿ 16, 2023) ತಮ್ಮ ತವರು ಕ್ಷೇತ್ರ ಗ್ವಾಲಿಯರ್ ಪ್ರವಾಸದಲ್ಲಿದ್ದ ಸಚಿವ ಪ್ರತ್ಯುಮ್ನ ಸಿಂಗ್ ತೋಮರ್ ಅವರು ರಸ್ತೆಗಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಳಪೆ ರಸ್ತೆಗಾಗಿ ಜನರ ಕ್ಷಮೆ ಯಾಚಿಸಿದರು. ಜೊತೆಗೆ ಅಲ್ಲಿದ್ದ ನಾಗರಿಕರೊಬ್ಬರ ಪಾದ ತೊಳೆದು ಕ್ಷಮೆ ಕೇಳಿದರು. ಶೀಘ್ರದಲ್ಲೇ ಹೊಸ ರಸ್ತೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು. ಸಚಿವರು ವ್ಯಕ್ತಿಯೊಬ್ಬನ ಪಾದಗಳನ್ನು ತೊಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಚಿವ ಪ್ರದ್ಯುಮ್ನ ನಿರಂತರವಾಗಿ ಪವರ್ ಮಿನಿಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದ್ಯುಮ್ನ್ ಸಿಂಗ್ ತೋಮರ್ ಹೆಸರು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!