ಹೊಸದಿಗಂತ ವರದಿ ಧಾರವಾಡ:
ನಗರದ ಸವದತ್ತಿ ರಸ್ತೆಯ ಮೃತ್ಯುಂಜಯ ಶಾಲೆಯಲ್ಲಿ ತೆರೆದ ಮಟಗಟ್ಟೆ ಕೇಂದ್ರದಲ್ಲಿ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು ಮತ ಚಲಾಯಿಸಿ, ಮತದಾನದ ಮಹತ್ವ ಸಾರಿದರು.
ಈ ವೇಳೆ ಮಾತನಾಡಿದ ಶ್ರೀಗಳು ಮತದಾನ ಅತ್ಯಂತ ಪವಿತ್ರ ಕಾರ್ಯ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿ ವ್ಯಕ್ತಿಯೂ ಕಡ್ಡಾಯ ಮತದನಾ ಮಾಡಬೇಕು ಎಂದು ಸಂದೇಶ ರವಾನಿಸಿದರು.