ಹೊಸದಿಗಂತ ವರದಿ ಹುಬ್ಬಳ್ಳಿ :
ಕಳೆದೆರೆಡು ದಿನದ ಹಿಂದೆ ಇಲ್ಲಿಯ ಮಿಲತ್ ನಗರದ ದೊಡ್ಡಮನಿ (ಮಿರ್ಚಿ) ಮೈದಾನದಲ್ಲಿ ಸಾಯಿನಗರದ ಒಂಬತ್ತು ವರ್ಷದ ಬಾಲಕ ನದೀಮ್ ಸಾಬ ಶೇಖ ಎಂಬ ಬಾಲಕ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಡಿಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಂಟ್ಲಮೆಂಟ್ನ ನಿವಾಸಿ ರವಿ ಬಳ್ಳಾರಿ (37) ಬಂಧಿತ ಆರೋಪಿ. ಗುರುವಾರ ಸಂಜೆ ಬಾಲಕ ಮೈದಾನಕ್ಕೆ ಆಟವಾಡಲು ಹೋದಾಗ ಆರೋಪಿ ರವಿ ಪರಿಚಯವಾಗಿದ್ದ. ಬಾಲಕ ಆತನಿಗೆ ಐದು ರೂಪಾಯಿ ಕೊಡಲು ಕೇಳಿದಾಗ ಮೊದಲು ನೀಡಿದ್ದಾನೆ. ಬಾಲಕ ಮತ್ತೆ ಐದು ರೂಪಾಯಿ ಕೊಡಲು ದುಬಾಲು ಬಿದ್ದಾಗ ಕೊಪಗೊಂಡ ಆರೋಪಿ ರವಿ ಅವನ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಆಗ ಬಾಲಕ ಮೃತಪಟ್ಟಿದ್ದಾನೆ.
ಬಳಿಕ ಬಾಲಕ ಮೃತ ದೇಹವನ್ನು ಮೈದಾನದಲ್ಲಿದ್ದ ಗಿಡ ಗಂಟಿ ಬೆಳೆದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮುಖ ಗುರುತು ಸಿಗದ ಹಾಗೆ ಕಲ್ಲು ಹಾಕಿ ಅಲ್ಲಿಂದ ಕಾಲು ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂಧಿಸಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.